ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ವಾರಣಾಸಿಗೆ ಕಾಲಿಟ್ಟ ಕೂಡಲೇ ಇಡೀ ದೇಗುಲ ನಗರಿ ಕೇಸರಿ ಸಮುದ್ರದಂತೆ ಕಂಗೊಳಿಸಿದೆ. ಮೋದಿಯವರು ನಡೆಸಿದ ರೋಡ್ ಶೋಗೆ ವ್ಯಕ್ತವಾದ ಸ್ಪಂದನೆ ಹಿಂದೆಂದೂ ಕಂಡರಿಯದ ರೀತಿಯಲ್ಲಿತ್ತು. ಇಂದು ಅವರು ಅಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.
ಲಂಕಾ ಏರಿಯಾದಿಂದ ಮೋದಿಯವರ ರೋಡ್ ಶೋ ಆರಂಭಗೊಂಡಿದ್ದು, ದಶಾಶ್ವಮೇಧ ಘಾಟ್ನಲ್ಲಿ ಇದು ಅಂತ್ಯಗೊಂಡಿತು. ಬನರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅವರು ರೋಡ್ ಶೋ ಆರಂಭಿಸಿದರು.
‘ಹರ್ ಹರ್ ಮಹಾದೇವ’ ಎಂಬ ಉದ್ಘೋಷಗಳು ಇಡೀ ವಾರಣಾಸಿಯಾದ್ಯಂತ ಮೊಳಗಿದವು. ದಶಾಶ್ವಮೇಧ ಘಾಟಿನಲ್ಲಿ ಮೋದಿಯವರು ಗಂಗಾ ಆರತಿಯನ್ನು ನೆರವೇರಿಸಿದರು. ಮಂತ್ರ ಘೋಷಗಳ ಮೊಳಗುವಿಕೆಯೊಂದಿಗೆ ಇಡೀ ಪರಿಸರವೇ ಆಧ್ಯಾತ್ಮಿಕವಾಗಿತ್ತು.
ರೋಡ್ ಶೋ ಬಳಿಕ ಮೋದಿಯವರು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು, ”ಏನೇ ಆದರೂ ನಾನು ಈ ದೇಶದ ಬಗ್ಗೆಯೇ ಚಿಂತೆ ಮಾಡುತ್ತೇನೆ. ಭಾರತ ಮೊದಲು ಎಂಬ ಮಂತ್ರದೊಂದಿಗೆ ನಾನು ಬದುಕಿದ್ದೇನೆ, ವಾರಣಾಸಿ ಜನರ ನಿರೀಕ್ಷೆಯನ್ನು ತಲುಪುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ” ಎಂದಿದ್ದಾರೆ.
ಭಯೋತ್ಪಾದನೆಗೆ ಅದರ ಭಾಷೆಯಲ್ಲೇ ಉತ್ತರ ನೀಡುವ ಶಕ್ತಿಯನ್ನು ನನಗೆ ಈ ಪವಿತ್ರ ನಗರ ನೀಡಿದೆ ಎಂದ ಅವರು, ನವ ಭಾರತ ಎಂದಿಗೂ ಉಗ್ರವಾದವನ್ನು ಸಹಿಸಿಕೊಳ್ಳುವುದಿಲ್ಲ, ಅದಕ್ಕೆ ಅದರದ್ದೇ ಆದ ಭಾಷೆಯಲ್ಲಿ ಉತ್ತರ ನೀಡುತ್ತದೆ ಎಂದಿದ್ದಾರೆ.
ಮೋದಿಯವರಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂತಾದವರು ಸಾಥ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.