ನವದೆಹಲಿ: ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆ ಜೈಶೇ ಇ ಮೊಹಮ್ಮದ್ ಎರಡು ಪ್ರತ್ಯೇಕ ಬೆದರಿಕೆ ಪತ್ರಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹತ್ಯೆ ಮಾಡುವ ಬೆದರಿಕೆಯನ್ನು ಹಾಕಿದೆ. ದೇಗುಲ, ರೈಲ್ವೇ ನಿಲ್ದಾಣಗಳನ್ನು ಟಾರ್ಗೆಟ್ ಮಾಡುವುದಾಗಿಯೂ ಬೆದರಿಕೆಯನ್ನು ಹಾಕಲಾಗಿದೆ.
ಉತ್ತರಪ್ರದೇಶದ ಶಮ್ಲಿ ಮತ್ತು ಉತ್ತರಾಖಂಡದ ರೂಕ್ರಿ ರೈಲ್ವೇ ಸ್ಟೇಶನಿನಲ್ಲಿ ಈ ಬೆದರಿಕೆ ಪತ್ರಗಳು ಸಿಕ್ಕಿದ್ದು, ಪಶ್ಚಿಮ ಉತ್ತರಪ್ರದೇಶದ ವಿವಿಧ ರೈಲು ನಿಲ್ದಾಣಗಳಲ್ಲಿ ಮತ್ತು ಪ್ರಮುಖ ದೇವಾಲಯಗಳಲ್ಲಿ ಸ್ಪೋಟವನ್ನು ನಡೆಸುವುದಾಗಿ ಬೆದರಿಕೆಗಳನ್ನು ಹಾಕಲಾಗಿದೆ. ಈ ಹಿನ್ನಲೆಯಲ್ಲಿ ಇಡೀ ಉತ್ತರಪ್ರದೇಶದಲ್ಲಿ ಹೈ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.
ಎರಡೂ ಪತ್ರಗಳು ಕೈಬರಹದ್ದಾಗಿವೆ ಎಂಬುದನ್ನು ಯುಪಿ ಪೊಲೀಸ್ ಮಹಾನಿರ್ದೇಶಕ ಓಪಿ ಸಿಂಗ್ ಖಚಿತಪಡಿಸಿದ್ದು, ಇದನ್ನು ಜೈಶೇ ಸಂಘಟನೆಯ ಸ್ಥಳಿಯ ಕಮಾಂಡರ್ ಬರೆದಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಎರಡೂ ಪತ್ರದಲ್ಲೂ ಒಂದೇ ರೀತಿಯ ವಿಷಯಗಳಿದ್ದು, ಕಾಶಿ ವಿಶ್ವನಾಥ ದೇಗುಲ, ಅಯೋಧ್ಯಾದ ರಾಮಜನ್ಮಭೂಮಿ ಸೇರಿದಂತೆ ಯುಪಿ, ದೆಹಲಿ, ಹರಿಯಾಣದ ಪ್ರಮುಖ ಧಾರ್ಮಿಕ ಸ್ಥಳಗಳ ಮೇಲೆ ದಾಳಿಯನ್ನು ನಡೆಸುವುದಾಗಿ ತಿಳಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯ ಘಟನೆ ಎರಡನೇ ಬಾರಿಗೆ ನಡೆಯುತ್ತಿದ್ದು, ಎಪ್ರಿಲ್ 19 ರಂದೂ ರೈಲ್ವೇ ಅಧಿಕಾರಿಗಳು ಪಂಜಾಬ್, ರಾಜಸ್ಥಾನ, ಉತ್ತರಾಖಂಡದ ರೈಲ್ವೇ ನಿಲ್ದಾಣಗಳನ್ನು ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಪತ್ರವನ್ನು ಸ್ವೀಕರಿಸಿದ್ದರು. ಹಿಂದಿಯಲ್ಲಿ ಇದನ್ನು ಬರೆಯಲಾಗಿತ್ತು. ಜೈಶೇ ಸಂಘಟನೆಯ ಏರಿಯಾ ಕಮಾಂಡರ್ ಮನ್ಸೂರ್ ಅಹ್ಮದ್ ಇದನ್ನು ಬರೆದಿದ್ದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.