ನವದೆಹಲಿ: ಭಾರತೀಯ ಹವಾಮಾನ ಇಲಾಖೆಯಿಂದ ಎಸ್ಎಂಎಸ್ ಮೂಲಕ ಪ್ರಸಾರವಾಗುವ ಸ್ಥಳೀಯ ಭಾಷೆಯ ಸಲಹೆಗಳಿಂದಾಗಿ ಸುಮಾರು 40 ದಶಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಮಾತ್ರವಲ್ಲ, ಈ ಸಲಹೆಗಳಿಂದಾಗಿ 22 ಪ್ರಮುಖ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳವೂ ಆಗಿದೆ ಎಂದು ಇಲಾಖೆಯ ಉಪನಿರ್ದೇಶಕರಾದ ಎಸ್. ಡಿ.ಅಟ್ಟಾರಿ ಹೇಳಿದ್ದಾರೆ.
ನವದೆಹಲಿಯ ಅಗ್ರಿಕ್ಚಲರ್ ಎಕ್ಸ್ಟೆನ್ಶನ್ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ”ರೈತರಿಗೆ ಇಲಾಖೆಯಿಂದ ಹವಾಮಾನ ಸಂಬಂಧಿತ ಸಲಹೆಗಳನ್ನು ನೀಡುತ್ತಿರುವುದರಿಂದ ದೇಶದಾದ್ಯಂತ ಕೃಷಿ ಹೆಚ್ಚುವರಿ ಇಳುವರಿಯನ್ನು ನೀಡಿದೆ” ಎಂದಿದ್ದಾರೆ.
”ಬೆಳೆಗಳ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುವ ಹವಮಾನ ಮತ್ತು ವಾತಾವರಣದ ವಿಷಯಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ರೈತರು ಸ್ವಾವಲಂಬಿಗಳಾಗುವಂತೆ ಮಾಡುವತ್ತ ಹೆಚ್ಚಿನ ಗಮನವನ್ನು ನೀಡುವ ಅವಶ್ಯಕತೆ ಇದೆ ಮತ್ತು ಅವರಿಗೆ ಯೋಜನಾ ಬದ್ಧವಾಗಿ ಕೃಷಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಲಹೆಗಳನ್ನು ನೀಡುವ ಅವಶ್ಯಕತೆ ಇದೆ” ಎಂದಿದ್ದಾರೆ.
2020ರ ವೇಳೆಗೆ ಹವಮಾನ ಇಲಾಖೆಯು ದೇಶದ 660 ಜಿಲ್ಲೆಗಳ 6,500 ಬ್ಲಾಕ್ಗಳಲ್ಲಿ ಸ್ಥಳೀಯ ಹವಮಾನ ವರದಿಯನ್ನು ಪ್ರಸಾರಗೊಳಿಸಲಿದೆ, ಇದರಿಂದಾಗಿ 9.5 ಕೋಟಿ ರೈತರಿಗೆ ಹವಮಾನ ಆಧಾರಿತವಾಗಿ ಕೃಷಿಯನ್ನು ನಿರ್ವಹಣೆ ಮಾಡುವುದು ಸುಲಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.