ಜಕಾರ್ತ: ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯ ಆರಂಭಿಸಿ 70 ವರ್ಷಗಳು ಪೂರೈಸಿದ ಸ್ಮರಣಾರ್ಥ, ಇಂಡೋನೇಷ್ಯಾವು ರಾಮಾಯಣ ಥೀಮ್ನ ಹೊಸ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ.
ಇಂಡೋನೇಷಿಯಾದ ಪ್ರಖ್ಯಾತ ಶಿಲ್ಪಿ ಪದ್ಮಶ್ರೀ ಬಾಪಕ್ ನಿಯೋಮನ್ ನುಆರ್ಟ್ ಅವರು ಈ ಅಂಚೆ ಚೀಟಿಯನ್ನು ವಿನ್ಯಾಸಗೊಳಿಸಿದ್ದು, ಹಿಂದು ಮಹಾಕಾವ್ಯ ರಾಮಾಯಣದಲ್ಲಿ ಬರುವ ಸನ್ನಿವೇಶವಾದ ಜಟಾಯು ಸೀತಾದೇವಿಯನ್ನು ರಕ್ಷಿಸಲು ಹೋರಾಡುವ ದೃಶ್ಯವನ್ನು ಇದು ಒಳಗೊಂಡಿದೆ.
”2018ರ ಮೇ ತಿಂಗಳಲ್ಲಿ ಪ್ರಧಾನಮಂತ್ರಿಯವರ ಭೇಟಿಯ ಸಮಯದಲ್ಲಿ ಒಪ್ಪಿಗೆ ಸೂಚಿಸಿದಂತೆ, ಇಂಡೋನೇಷ್ಯಾ ಸರಕಾರದ ಅಂಚೆ ಇಲಾಖೆಯು ರಾಮಾಯಣದ ವಿಷಯದ ಬಗ್ಗೆ ವಿಶೇಷ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದೆ” ಎಂದು ಜಕಾರ್ತಾದಲ್ಲಿನ ಭಾರತೀಯ ರಾಯಭಾರ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.
ಈ ವಿಶೇಷವಾಗಿ ವಿನ್ಯಾಸಪಡಿಸಲಾಗಿರುವ ಅಂಚೆ ಚೀಟಿಯನ್ನು ಜಕಾರ್ತದ ಫಿಲ್ಯಾಟಲಿ ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಇಂಡೋನೇಷ್ಯಾದಲ್ಲಿನ ಭಾರತದ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಮತ್ತು ಇಂಡೋನೇಷಿಯಾದ ಉಪ ವಿದೇಶಾಂಗ ಸಚಿವ ಅಬ್ದುರ್ರಾಹನ್ ಮೊಹಮ್ಮದ್ ಫಾಚಿರ್ ಅವರು ಮಂಗಳವಾರ ಜಕಾರ್ತದಲ್ಲಿ ನಡೆದ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 70 ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಜಂಟಿ ಅಧ್ಯಕ್ಷೀಯತೆಯನ್ನು ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.