ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಎನ್ಡಿಎ ಸರ್ಕಾರ ರಚನೆಯಾದರೆ ವ್ಯವಸ್ಥೆಯನ್ನು ಮತ್ತಷ್ಟು ಸ್ವಚ್ಛಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಟೈಮ್ಸ್ ನೌ ಮಾಧ್ಯಮಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಮೊದಲನೆಯ ಅವಧಿಯಲ್ಲಿ ನಾವು ಭ್ರಷ್ಟಾಚಾರಿಗಳನ್ನು ಜೈಲಿನ ಬಾಗಿಲವರೆಗೂ ಕರೆದುಕೊಂಡು ಬಂದಿದ್ದೇವೆ, ಮುಂದಿನ ಅವಧಿಯಲ್ಲಿ ಅವರನ್ನು ಜೈಲಿಗೆ ಹಾಕುವ ಕಾರ್ಯ ಮಾಡಲಿದ್ದೇವೆ ಎಂದಿದ್ದಾರೆ.
ದೇಶದಾದ್ಯಂತ ನಡೆಯುತ್ತಿರುವ ಐಟಿ ದಾಳಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ಪ್ರಕಾರವೇ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ. ಇದರಲ್ಲಿ ಯಾವುದೇ ರಾಜಕೀಯ ಪಿತೂರಿಗಳು ಇಲ್ಲ. ನಾವು ಸುಮ್ಮನೆ ಕುಳಿತರೆ ನೀವು ಅಧಿಕಾರದಲ್ಲಿರುವವರು ಏನು ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎನ್ನುತ್ತೀರಾ ಆದರೆ ಕ್ರಮ ಕೈಗೊಂಡಾಗ ರಾಜಕೀಯ ಪಿತೂರಿ ಎನ್ನುತ್ತೀರಿ. ದಾಳಿಗಳಲ್ಲಿ ಯಾವುದೇ ರಾಜಕೀಯ ದುರುದ್ದೇಶಗಳಿಲ್ಲ. ಎಲ್ಲಾ ಪ್ರಕ್ರಿಯೆ ಕಾನೂನಿನ ಪ್ರಕಾರ ನಡೆಯುತ್ತಿದೆ ಎಂದಿದ್ದಾರೆ.
ನಮ್ಮ ಅವಧಿಯಲ್ಲಿ ಮಹಾಮಿಲಾವಟ್ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗಿದ್ದಾರೆ. ಇನ್ನು ನಾಲ್ಕು ತಲೆಮಾರುಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದವರು ಇಂದು ಜಾಮೀನಿನ ಮೇಲೆ ಹೊರಗಿದ್ದಾರೆ. ಯಾರು ಜಾಮೀನಿನ ಮೇಲೆ ಹೊರಗೆ ಇರಬೇಕು ಎನ್ನುವುದನ್ನು ಸರ್ಕಾರಕ್ಕೆ ನಿರ್ಧರಿಸಲು ಸಾಧ್ಯವಿಲ್ಲ. ಕಾಂಗ್ರೇಸ್ ಆಡಳಿತದಲ್ಲಿ ಸಚಿವರಾಗಿದ್ದವರು ಇಂದು ಎರಡು ದಿನಕ್ಕೊಮ್ಮೆ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ನ್ಯಾಯಾಲಯಕ್ಕೆ ಹೋಗೋದನ್ನು ನಿಲ್ಲಿಸಿದ ದಿನ ಅವರು ಜೈಲುಪಾಲಾಗ ಬೇಕಾಗಬಹುದು. ಕಾನೂನನ್ನು ಬಳಕೆ ಮಾಡಿಕೊಂಡು ಅವರು ಜಾಮೀನು ಪಡೆಯುತ್ತಿದ್ದಾರೆ, ಕಾನೂನನ್ನೇ ಬಳಕೆ ಮಾಡಿಕೊಂಡು ಸರಕಾರ ಅವರ ಮೇಲಿನ ಆರೋಪವನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದೆ. ನೀರವ್ ಮೋದಿ, ವಿಜಯ ಮಲ್ಯರಂತಹ ವಂಚಕರು ದೇಶ ಬಿಟ್ಟಿದ್ದು ನಿಜ, ನಮ್ಮ ಸರಕಾರದಲ್ಲಿ ಅವರ ಎಲ್ಲಾ ಆಟಗಳು ನಿಲ್ಲುತ್ತದೆ ಎಂಬ ಭಯದಿಂದಲೇ ಅವರು ಓಡಿ ಹೋಗಿದ್ದಾರೆ. ಮೋದಿ ಸರ್ಕಾರ ನಮ್ಮಿಂದ ಹಣ ವಾಪಾಸ್ ಪಡೆದೇ ಪಡೆಯುತ್ತದೆ ಎಂದು ಅವರಿಗೆ ತಿಳಿದಿತ್ತು, ಅದೇ ಭಯಕ್ಕೆ ಓಡಿ ಹೋದರು. ಓಡಿ ಹೋದ ಮೂವರ ಬಗ್ಗೆ ಮಾಧ್ಯಮಗಳು ಹೆಚ್ಚಾಗಿ ಗಮನ ಹರಿಸುತ್ತವೆ. ಆದರೆ ನಾವು ಇಬ್ಬರನ್ನು ವಾಪಸ್ ಕರೆದುಕೊಂಡು ಕೂಡ ಬಂದಿದ್ದೇವೆ. ವಾಪಾಸ್ ಬಂದಿರುವ ಮಿಶೆಲ್ ಮಾಮ, ಸಕ್ಸೇನಾ ಬಗ್ಗೆ ಕೂಡ ಮಾತನಾಡಿ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.