ನವದೆಹಲಿ: ಇಂದು ದೇಶದ ಹಲವೆಡೆ ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಕ್ರಿಶ್ಚಿಯನ್ ಸಮುದಾಯದವರು ಗುಡ್ ಫ್ರೈಡೇ ಅನ್ನು ಆಚರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ.
ಹನುಮಾನ್ ಜಯಂತಿ ಪ್ರಯುಕ್ತ ಟ್ವಿಟ್ ಮಾಡಿರುವ ಮೋದಿ, ‘ಹನುಮಾನ್ ಜಯಂತಿ ಶುಭಕಾಮನೆಗಳು. ವಾಯಪುತ್ರನ ಜೀವನ, ಸಮರ್ಪಣಾ ಭಾವನೆ, ಭಕ್ತಿ ಮತ್ತು ಅಚಲ ಸಂಕಲ್ಪ ನಮಗೆ ಕೆಟ್ಟದರ ವಿರುದ್ಧ ಹೋರಾಡುವ ಪ್ರೇರಣೆಯನ್ನು ನೀಡುತ್ತದೆ’ ಎಂದಿದ್ದಾರೆ.
Today we remember the sacrifice of Lord Jesus Christ. His life, rich ideals and exemplary courage are a source of strength for many. His teachings emphasise a world free from inequality and injustice.
— Chowkidar Narendra Modi (@narendramodi) April 19, 2019
ಶ್ರೀರಾಮನ ಪರಮಭಕ್ತ ಹನುಮಂತನ ಜನ್ಮದಿನವನ್ನು ಹನುಮಾನ್ ಜಯಂತಿಯಾಗಿ ಆಚರಿಸಲಾಗುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಹನುಮಾನ್ ಜಯಂತಿ ಆಚರಿಸುತ್ತಾರೆ.
ಗುಡ್ ಫ್ರೈಡೇ ಪ್ರಯುಕ್ತ ಟ್ವಿಟ್ ಮಾಡಿರುವ ಅವರು, ‘ಇಂದು ನಾವು ಜೀಸಸ್ ಕ್ರಿಸ್ತನ ತ್ಯಾಗವನ್ನು ಸ್ಮರಣೆ ಮಾಡುತ್ತಿದ್ದೇವೆ. ಆತನ ಜೀವನ, ಶ್ರೀಮಂತ ಚಿಂತನೆ ಮತ್ತು ಅಸಾಧಾರಣಾ ಧೈರ್ಯ ಅಪಾರ ಜನತೆಗೆ ಪ್ರೇರಣಾದಾಯಕವಾಗಿದೆ. ಆತನ ಬೋಧನೆಗಳು ಅಸಮಾನತೆ ಮತ್ತು ಅನ್ಯಾಯ ಮುಕ್ತ ವಿಶ್ವದ ನಿರ್ಮಾಣವನ್ನು ಪ್ರತಿಪಾದಿಸುತ್ತದೆ’ ಎಂದಿದ್ದಾರೆ.
ಕ್ರಿಸ್ತ ಮರಣವನ್ನಪ್ಪಿದ ದಿನವನ್ನು ಗುಡ್ ಫ್ರೈಡೇ ಅನ್ನು ಆಚರಿಸಲಾಗುತ್ತದೆ.
हनुमान जयंती की बहुत-बहुत शुभकामनाएं। पवनपुत्र का जीवन, उनका समर्पण, उनकी भक्ति और दृढ़ संकल्प हमें बुराइयों के खिलाफ लड़ने की प्रेरणा देता है।
— Chowkidar Narendra Modi (@narendramodi) April 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.