ಜೇಮ್ಶೆಡ್ಪುರ: ಗಿನ್ನಿಸ್ ದಾಖಲೆಯ ಸಾಧಕಿ ಮತ್ತು ತಮಿಳುನಾಡು ಮೂಲದ ಶಿಕ್ಷಕಿ ರಾಜಲಕ್ಷ್ಮೀ ಮಂಡ ಅವರು ತಮ್ಮ ಬುಲೆಟ್ ಮೋಟಾರ್ ಸೈಕಲ್ ಮೂಲಕ 30,000 ಕಿಮೀ ಪ್ರಯಾಣಿಸಿ 18 ರಾಜ್ಯಗಳನ್ನು ಸುತ್ತಾಡಿದ್ದಾರೆ. ನರೇಂದ್ರ ಮೋದಿಯವರಿಗೆ ಮತ ಚಲಾಯಿಸಿ ಮತ್ತು ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಾ ಅವರು ಈವರೆಗೆ 18 ರಾಜ್ಯ ಸುತ್ತಾಡಿದ್ದಾರೆ. ಮೊನ್ನೆ ಬುಧವಾರ ಸ್ಟೀಲ್ ನಗರಿ ಜೇಮ್ಶೆಡ್ಪುರಕ್ಕೆ ತಲುಪಿದ್ದಾರೆ.
ಜೇಮ್ಶೆಡ್ಪುರದ ಬಿಜೆಪಿ ಜಿಲ್ಲಾಧ್ಯಕ್ಷ ದಿನೇಶ್ ಕುಮಾರ್ ಮತ್ತು ಭಾರತೀಯ ಜನತಾ ಯುವ ಮೋರ್ಛಾ ಜಿಲ್ಲಾಧ್ಯಕ್ಷ ಅಮರ್ಜೀತ್ ಸಿಂಗ್ ರಾಜಾ ಅವರು ರಾಜಲಕ್ಷ್ಮೀಯನ್ನು ಮತ್ತು ಅವರ 25 ಸದಸ್ಯರುಳ್ಳ ‘ಕಹೋ ದಿಲ್ ಸೇ, ಮೋದಿ ಫಿರ್ ಸೇ’ ಅಭಿಯಾನ ತಂಡವನ್ನು ಬಿಜೆಪಿ ಕಛೇರಿಯಲ್ಲಿ ಬರಮಾಡಿಕೊಂಡರು. ಅಲ್ಲಿಂದ ರಾಜಲಕ್ಷ್ಮೀ ಅವರ ಯಾತ್ರೆ ಸೆರೈಕೆಲ-ಖರ್ಸ್ವಾನ ಜಿಲ್ಲೆಗೆ ತೆರಳಿದೆ.
ಈ ವೇಳೆ ಮಾತನಾಡಿದ ರಾಜಲಕ್ಷ್ಮೀಯವರು, ”ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ, ಮಹಿಳೆಯರಿಗೆ ಸಾಲ ನೀಡುವ ಮುದ್ರಾ ಯೋಜನೆಯಿಂದ, ಸುಕನ್ಯಾ ಯೋಜನೆಯಿಂದ, ಆವಾಸ್ ಮತ್ತು ಉಜ್ವಲಾ ಯೋಜನೆಯಿಂದ ಸಾಕಷ್ಟು ಪ್ರಭಾವಿತಗೊಂಡಿದ್ದೇನೆ. ಮಹಿಳಾ ಸಬಲೀಕರಣಕ್ಕೆ ಅವರು ನಿಜವಾದ ಉತ್ತೇಜನವನ್ನು ನೀಡುತ್ತಿದ್ದಾರೆ. ಹೀಗಾಗಿ ನಾವು 25 ಮಹಿಳೆಯರು ಜೊತೆಗೂಡಿ ಬುಲೆಟ್ ಸಂಚಾರ ಕೈಗೊಂಡೆವು, ಜನರಿಗೆ ಮತ್ತೊಮ್ಮೆ ಯಾಕೆ ಬೇಕು ಎಂದು ಅರಿವು ಮೂಡಿಸಿದೆವು” ಎಂದಿದ್ದಾರೆ.
ತಮಿಳುನಾಡು ಮೂಲದವರಾದ ರಾಜಲಕ್ಷ್ಮೀ ಅವರು, ಜನವರಿ 14 ರಿಂದ ಬೆಂಗಳೂರಿನಿಂದ ಸಂಚಾರವನ್ನು ಆರಂಭಿಸಿದ್ದರು. 2017ರಲ್ಲಿ ಇವರು 9.5 ಟನ್ ತೂಕದ ಟ್ರಕ್ ಅನ್ನು ಎಳೆಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ. ‘ಮೇ ಭೀ ಚೌಕಿದಾರ್ ಟಿ-ಶರ್ಟ್ನೊಂದಿಗೆ ಇವರ ತಂಡ ಪ್ರಯಾಣ ನಡೆಸುತ್ತಿದ್ದು, ಮೇ 6ರಂದು ದೆಹಲಿಯನ್ನು ತಲುಪಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.