ನವದೆಹಲಿ: ಎ-ಸ್ಯಾಟ್ ಕಾರ್ಯಕ್ರಮವು ಭಾರತಕ್ಕೆ ಬಹಳ ಹೆಮ್ಮೆಯ ಕ್ಷಣ ಮತ್ತು ಸ್ಯಾಟಲೈಟ್ ವಿರೋಧಿ ಕ್ಷಿಪಣಿಯ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿರುವ ರಾಷ್ಟ್ರಗಳ ಉತ್ಕೃಷ್ಟ ಕ್ಲಬ್ಗೆ ಈ ಕಾರ್ಯಕ್ರಮ ನಮ್ಮ ದೇಶವನ್ನು ಸೇರ್ಪಡೆಗೊಳಿಸಿದೆ ಎಂದು ಡಿಆರ್ಡಿಓದ ಮಾಜಿ ಡೈರೆಕ್ಟರ್ ಜನರಲ್ ಎಸ್ ಕ್ರಿಸ್ಟೋಫರ್ ಟೈಮ್ಸ್ ನೌ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಸ್ತುತ ಡಿಆರ್ಡಿಓದ ಆಡಳಿತ, ಅದರ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಮತ್ತು ಅವರ ತಂಡದ ನಿರ್ವಹಣೆಯನ್ನು ಕ್ರಿಸ್ಟೋಫರ್ ಪ್ರಶಂಸಿಸಿದ್ದಾರೆ. ಈ ತಂಡವು ನಿಗದಿತ ಸಮಯದೊಳಗಡೆಯೇ ಸ್ಯಾಟಲೈಟ್ ವಿರೋಧಿ ಕ್ಷಿಪಣಿ ಎ-ಸ್ಯಾಟ್ ಅನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
‘ಎಸ್. ರೆಡ್ಡಿ ಮತ್ತು ಅವರ ತಂಡ ಕಡಿಮೆ ಅವಧಿಯಲ್ಲೇ ಕಾರ್ಯವನ್ನು ಪೂರ್ಣಗೊಳಿಸಿ, ದೇಶಕ್ಕೆ ಹೆಮ್ಮೆಯನ್ನ ತಂದುಕೊಟ್ಟಿದೆ. ಅದು ಅತ್ಯಂತ ಹೆಮ್ಮೆಯ ಕ್ಷಣ. ವ್ಯವಸ್ಥೆಯ ಬಗ್ಗೆ ಮಾತನಾಡಬೇಕೆಂದರೆ, ಹಿಂದಿನ ಕಾರ್ಯಕ್ರಮಗಳ ಮುಂದುವರೆದ ಭಾಗ ಇದಾಗಿದೆ, ನೇರ ದಾಳಿ ನಡೆದ ಸಂದರ್ಭದಲ್ಲಿ ನಾವು ಶಸ್ತ್ರಾಸ್ತ್ರೀಕರಣಗೊಳಿಸುವ ಅಗತ್ಯವಿಲ್ಲ. ಕ್ಷಿಪಣಿಗಳನ್ನು ಸರಣಿಯಾಗಿ ಉತ್ಪಾದಿಸಬೇಕೇ ಅಥವಾ ಬೇಡವೇ ಎಂಬುದು ಸರ್ಕಾರಕ್ಕೆ ಬಿಟ್ಟದ್ದು’ ಎಂದಿದ್ದಾರೆ.
ಭೂಕಕ್ಷೆಯಲ್ಲಿರುವ ಶತ್ರು ರಾಷ್ಟ್ರಗಳ ಉಪಗ್ರವನ್ನು ಹೊಡೆದುರುಳಿಸುವಂತಹ ಸಾಮರ್ಥ್ಯ ಎಸ್ಯಾಟ್ ಕ್ಷಿಪಣಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.