ನವದೆಹಲಿ: ಭಾರತದ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರರು ಸತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಮಾಡುವ ಕಾರ್ಯ ಪಾಕಿಸ್ಥಾನದ್ದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಫೆ. 26 ರ ವೈಮಾನಿಕ ದಾಳಿಯಲ್ಲಿ ಭಾರತ ಮುಟ್ಟದೇ ಇದ್ದ ಸ್ಥಳಗಳಿಗೆ ಪಾಕಿಸ್ಥಾನ ಪತ್ರಕರ್ತರನ್ನು ಕರೆದುಕೊಂಡು ಹೋಗಿದೆ. ಅದು ಪತ್ರಕರ್ತರ ಮದರಸ ಪಿಕ್ನಿಕ್ ಆಗಿತ್ತು. ಮದರಸವು ಇಳಿಜಾರಿನ ಕೆಳಗಿನ ಅಂತ್ಯದಲ್ಲಿದೆ ಮತ್ತು ಮದರಸದ ಹಿಂದೆ ದೊಡ್ಡ ಕಾಡಿದೆ. ಆ ಕಾಡಿನಲ್ಲಿ ಭಯೋತ್ಪಾದನಾ ಶಿಬಿರಗಳಿವೆ. ಆದರೆ ಇಲ್ಲಿಗೆ ಕರೆದುಕೊಂಡು ಹೋಗದೆ ಬರೀ ಮದರಸಕ್ಕೆ ಕರೆದುಕೊಂಡು ಹೋಗಿ ಪಾಕಿಸ್ಥಾನ ತನ್ನನ್ನೇ ತಾನು ಅಪಹಾಸ್ಯ ಮಾಡಿಕೊಂಡಿದೆ’ ಎಂದಿದ್ದಾರೆ.
‘ದಾಳಿ ನಡೆಯುದಕ್ಕೂ ಮುನ್ನ, ಪಾಕಿಸ್ಥಾನದ ಹಲವಾರು ವೆಬ್ಸೈಟ್ಗಳು, ದಾಳಿ ನಡೆಯಲ್ಪಟ್ಟ ಜಾಗದಲ್ಲಿ ಉಗ್ರ ಶಿಬಿರಗಳಿದ್ದು, ಅಲ್ಲಿ ಯುವಕ ನೇಮಕಾತಿ ಮತ್ತು ತರಬೇತಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದವು. 2008ರ ಮುಂಬಯಿ ದಾಳಿ ಸೇರಿದಂತೆ ಹಲವಾರು ನಟೋರಿಯಸ್ ಕೃತ್ಯಗಳನ್ನು ಎಸಗಿದ್ದ ಉಗ್ರ ಯುವಕರಿಗೆ ಬಂದು ತರಬೇತಿ ಸೇರುವಂತೆ ಕರೆ ನೀಡುತ್ತಿದ್ದ. ಭವಿಷ್ಯದ ಜಿಹಾದಿಗಳಿಗೆ ತರಬೇತಿಯನ್ನು ನೀಡಲು ನಿವೃತ್ತ ತರಬೇತುದಾರರನ್ನೂ ನಿಯೋಜನೆಗೊಳಿಸಲಾಗುತ್ತಿತ್ತು. ನೀವು ವೆಬ್ ಸೈಟ್ ನೋಡಿದರೆ ಅಲ್ಲಿ ಎಷ್ಟು ಮಂದಿ ತರಬೇತಿ ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಿಂದ ನಿಮಗೆ ಸತ್ತ ಉಗ್ರರ ಒಂದು ಅಂದಾಜು ಲೆಕ್ಕ ಸಿಗುತ್ತದೆ’ ಎಂದಿದ್ದಾರೆ.
‘ವೈಮಾನಿಕ ದಾಳಿ ನಡೆದ ದಿನ, ಕಾರ್ಯಾಚರಣೆ ಎಷ್ಟು ಯಶಸ್ವಿಯಾಯಿತು ಮತ್ತು ಆಗಿಲ್ಲ ಎಂಬುದಕ್ಕಿಂತ ಹೆಚ್ಚಾಗಿ ನನಗೆ ನನ್ನ ಜನರ ಜೀವದ ಬಗ್ಗೆ ಹೆಚ್ಚು ಕಾಳಜಿ ಇತ್ತು. ಬೆಳಿಗ್ಗೆ ನನಗೆ 4 ಗಂಟೆಗೆ ದೂರವಾಣಿ ಕರೆ ಬಂದಿತ್ತು, ಅದರಲ್ಲಿ ನಮ್ಮ ಎಲ್ಲಾ ಯೋಧರು ಸುರಕ್ಷಿತವಾಗಿ ಮರಳಿದ್ದಾರೆ ಎಂಬ ಸುದ್ದಿ ತಿಳಿಯುತು. ಆಗಲೇ ನಾನು ನಿರಾಳಳಾದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.