ನವದೆಹಲಿ: ಪಾಕಿಸ್ಥಾನ ಜೊತೆಗಿನ ಗಡಿಯನ್ನು ರಕ್ಷಣೆ ಮಾಡುವುದರಲ್ಲಿ ಸದಾ ನಿರತವಾಗಿರುವ ಶಸ್ತ್ರಾಸ್ತ್ರ ಪಡೆಗಳ ಶಕ್ತಿ ಮತ್ತು ಸಿದ್ಧತೆಯನ್ನು ಇನ್ನಷ್ಟು ವೃದ್ಧಿ ಮಾಡುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪುಲ್ವಾಮ ದಾಳಿಯ ಬಳಿಕ ಮೂರೂ ಸೇನಾ ಪಡೆಗಳಿಗೆ ತಮ್ಮ ಆಯ್ಕೆಯ ರಕ್ಷಣಾ ಪರಿಕರಗಳನ್ನು ಖರೀದಿ ಮಾಡುವ ಅಧಿಕಾರವನ್ನು ನೀಡಿದೆ.
ಮೂರು ಸೇನಾಪಡೆಗಳು, ತಮಗೆ ನೀಡಿದ ಅಧಿಕಾರದಡಿಯಲ್ಲಿ ತಮಗೆ ಬೇಕಾದಂತಹ ರಕ್ಷಣಾ ಪರಿಕರವನ್ನು ಪ್ರಸ್ತಾವನೆ ಸಲ್ಲಿಸಿದ ಮೂರು ತಿಂಗಳೊಳಗೆ ತಲಾ ರೂ. 300 ಕೋಟಿ ವೆಚ್ಚದಲ್ಲಿ ಖರೀದಿ ಮಾಡಬಹುದಾಗಿದೆ.
ತುರ್ತು ಅಧಿಕಾರಗಳ ಅಡಿಯಲ್ಲಿ, ಇಂಟಿಗ್ರೇಟೆಡ್ ಫೈನಾನ್ಷಿಯಲ್ ಅಡ್ವೈಸರ್ನ ಭದ್ರತಾ ಹಣಕಾಸು ಇಲಾಖೆಯ ಸಮ್ಮತಿಯನ್ನು ತೆಗೆದುಕೊಳ್ಳುವುದು ಪಡೆಗಳಿಗೆ ಅಗತ್ಯವಿರುವುದಿಲ್ಲ ಮತ್ತು ಸಿಂಗಲ್ ವೆಂಡರ್ನಿಂದಲೂ ಸಲಕರಣೆಗಳನ್ನು ಖರೀದಿಸುವ ಆಯ್ಕೆಯನ್ನೂ ಮಾಡಬಹುದು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಪುಲ್ವಾಮ ದಾಳಿ ನಡೆದ ಕೆಲವೇ ವಾರಗಳೊಳಗೆ ಸೇನಾಪಡೆಗಳಿಗೆ ತುರ್ತು ಅಧಿಕಾರವನ್ನು ನೀಡಲಾಗಿದೆ ವರದಿ ಹೇಳಿದೆ.
ಈ ತುರ್ತು ಅಧಿಕಾರವನ್ನು ಬಳಸಿಕೊಂಡು, ಸೇನೆಯು 250 ಸ್ಪೈಕ್ ಆ್ಯಂಟಿ ಟ್ಯಾಂಕ್ ಮಿಸೈಲ್ ಅನ್ನು ಇಸ್ರೇಲ್ನಿಂದ ಖರೀದಿಸುತ್ತಿದೆ, ಈ ಮಿಸೈಲ್ ಅನ್ನು ಶತ್ರುಗಳ ಟ್ಯಾಂಕ್ ರೆಜಿಮೆಂಟ್ ವಿರುದ್ಧ ಬಳಕೆ ಮಾಡಬಹುದಾಗಿದೆ.
ಅದೇ ರೀತಿ, ವಾಯುಸೇನೆ ಮತ್ತು ನೌಕಾಸೇನೆ ಕೂಡ ಮಿಸೈಲ್ ಮತ್ತು ವೆಪನ್ ಸಿಸ್ಟಮ್ ಅನ್ನು ಖರೀದಿ ಮಾಡಲು ಪ್ರಸ್ತಾವಣೆ ಸಿದ್ಧಪಡಿಸುತ್ತಿದೆ.
ಸೇನಾಪಡೆಗಳೇ ಯುದ್ಧವನ್ನು ಮಾಡಬೇಕಾದುದರಿಂದ ಯಾವ ಶಸ್ತ್ರಾಸ್ತ್ರಗಳು ನಮಗೆ ಅಗತ್ಯವಿದೆ ಎಂಬುದನ್ನು ನಿರ್ಧರಿಸುವ ಅವಕಾಶವನ್ನೂ ಅವರಿಗೇ ನೀಡಬೇಕು ಎಂಬುದು ರಕ್ಷಣಾ ಸಚಿವಾಲಯದ ಅನಿಸಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.