ನವದೆಹಲಿ: ಎನ್ಡಿಎ ಸರ್ಕಾರವು ಜನರ ಆಶೋತ್ತರಗಳನ್ನು ಮತ್ತು ಕನಸುಗಳನ್ನು ಈಡೇರಿಸಲು ಸಂಪೂರ್ಣ ಬದ್ಧವಾಗಿದೆ, ಈ ಐದು ವರ್ಷಗಳ ಕಾಲ ನಾವು ಜನರ ಅಗತ್ಯಗಳನ್ನು ಪೂರೈಸುವತ್ತ ಗಮನ ಹರಿಸಿದ್ದೇವೆ ಮತ್ತು ಮುಂದಿನ ಐದು ವರ್ಷಗಳ ಕಾಲ ಜನರ ಆಶೋತ್ತರ ಮತ್ತು ಕನಸುಗಳನ್ನು ಈಡೇರಿಸುವತ್ತ ಗಮನ ಹರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಡಿಡಿ ನ್ಯೂಸ್ಗೆ ಸಂದರ್ಶನವನ್ನು ನೀಡಿದ ಅವರು, ರೈತರ ಕಲ್ಯಾಣಕ್ಕೂ ಎನ್ಡಿಎ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಅನುಷ್ಠಾನಗೊಳಿಸಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ನೆರವಾಗಿದೆ ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಎಲ್ಲರ ಒಳಿತಿಗಾಗಿ ಎಲ್ಲರ ಜೊತೆಗೂಡಿ ಕಾರ್ಯ ಮಾಡುವುದರಲ್ಲಿ ಭಾರತಕ್ಕೆ ನಂಬಿಕೆ ಇದೆ ಎಂದಿದ್ದಾರೆ.
ಮಂಗಳೂರಿನ ಸಮಾವೇಶದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ರಸ್ತೆಯ ಇಕ್ಕೆಲ್ಲಗಳಲ್ಲಿ ತನ್ನನ್ನು ನೋಡಲು ನಿಂತ ಜನರನ್ನು ಕಂಡು ನಾನು ಆಶ್ಚರ್ಯಚಕಿತನಾದೆ, ಅದು ನನ್ನ ರೋಡ್ ಶೋ ಆಗಿರಲಿಲ್ಲ ಆದರೂ ಅಭೂತಪೂರ್ವ ಜನ ಬೆಂಬಲ ದೊರಕಿತು. ಸಮಾವೇಶದ ಫೋಟೋಗಳನ್ನು ನೋಡಿದಾಗ ಜನಸಾಗರ ಕಂಡು ಪುಳಕಿತನಾದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ನ್ಯಾಯ್ ಯೋಜನೆ ಬಗ್ಗೆ ಕಿಡಿಕಾರಿದ ಅವರು 1984ರ ಸಿಖ್ ದಂಗೆಯಲ್ಲಿ ಸಂತ್ರಸ್ಥರಾದವರಿಗೆ ಯಾರು ನ್ಯಾಯ ನೀಡುತ್ತಾರೆ?, ಈ ನ್ಯಾಯ್ ಎಂದು ಹೇಳುವ ಮೂಲಕ ಕಳೆದ 70 ವರ್ಷಗಳಲ್ಲಿ ನಾವು ಅನ್ಯಾಯ ಮಾಡಿದ್ದೇವೆ ಎಂಬುದನ್ನು ಅವರುಗಳು ಒಪ್ಪಿಕೊಂಡಿದ್ದಾರೆ ಎಂದರು.
ಹೆದರಿಕೊಂಡೆ ರಾಹುಲ್ ಗಾಂಧಿ ಅಮೇಥಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.