ನವದೆಹಲಿ: ಇಂದು ಭಾರತವು ಒಡಿಶಾದ ಕರಾವಳಿಯಲ್ಲಿ 1,000 ಕಿ.ಮೀ. ಸ್ಟ್ರೈಕ್ ಶ್ರೇಣಿಯ ಸಬ್-ಸೋನಿಕ್ ಕ್ರೂಸ್ ಕ್ಷಿಪಣಿ ‘ನಿರ್ಭಯ್’ಯನ್ನು ಪರೀಕ್ಷಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಡಿಯಲ್ಲಿರುವ ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಅಭಿವೃದ್ಧಿಪಡಿಸಿದ ನಿರ್ಭಯ್ ಬಹು ವೇದಿಕೆಗಳಿಂದ ಲಾಂಚ್ ಮಾಡಬಹುದಾದ, ದೀರ್ಘಕಾಲದ, ಎಲ್ಲಾ-ಹವಾಮಾನದಲ್ಲೂ ಬಳಕೆಯಾಗಬಲ್ಲ ಕ್ಷಿಪಣಿಯಾಗಿದೆ. ಈ ಸಬ್-ಸೋನಿಕ್ ಕ್ರೂಸ್ ಕ್ಷಿಪಣಿ ಸಾಂಪ್ರದಾಯಿಕ ಮತ್ತು ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಘನ ರಾಕೆಟ್ ಬೂಸ್ಟರ್ ಸಹಾಯದಿಂದ ಇದು ಟೇಕ್ ಆಫ್ ಆಗಿದ್ದು, ಇದು ಅಗತ್ಯವಾದ ವೇಗ ಮತ್ತು ಎತ್ತರವನ್ನು ತಲುಪಿದಾಗ, ಟರ್ಬೊಫನ್ ಎಂಜಿನ್ನಿಂದ ಮತ್ತಷ್ಟು ಚಾಲನೆಯನ್ನು ನಿರ್ವಹಿಸಲ್ಪಡುತ್ತದೆ. ರಿಸರ್ಚ್ ಸೆಂಟರ್ ಇಮಾರತ್ (ಆರ್ಸಿಐ) ಅಭಿವೃದ್ಧಿಪಡಿಸಿದ ಇನರ್ಶಿಯಲ್ ನ್ಯಾವಿಗೇಶನ್ ಸಿಸ್ಟಮ್ ಈ ಕ್ಷಿಪಣಿಗೆ ಗೈಡ್ ಮಾಡುತ್ತದೆ, ಆದರೆ ಎತ್ತರವನ್ನು ನಿರ್ಧರಿಸಲು ರೇಡಿಯೋ ಆಲ್ಟಿಮೀಟರ್ ಅನ್ನು ಬಳಸಲಾಗುತ್ತದೆ.
ನಿರ್ಭಯ್ಗೆ ರಿಂಗ್ ಲೇಸರ್ ಗೈರೊಸ್ಕೋಪ್ (ಆರ್ಎಲ್ಜಿ) ಆಧಾರಿತ ಮಾರ್ಗದರ್ಶನ, ನಿಯಂತ್ರಣ ಮತ್ತು ನಾವಿಗೇಶಣ್ ಸಿಸ್ಟಮ್ ಅಳವಡಿಸಲಾಗಿದೆ. ಇದು MEMS ಆಧಾರಿತ ಇನರ್ಶಿಯಲ್ ನಾವಿಗೇಶನ್ (INS) ಮತ್ತು ಜಿಪಿಎಸ್ ಸಿಸ್ಟಮ್ನೊಂದಿಗೂ ಬರುತ್ತದೆ. 6 ಮೀಟರ್ ಅಳತೆ ಇರುವ ನಿರ್ಭಯ್ ಕ್ಷಿಪಣಿ ಅಗಲವು 0.52 ಮೀಟರ್ ಇದೆ ಮತ್ತು ಇದು 2.7 ಮೀಟರ್ಗಳಷ್ಟು ಅಗಲದ ವಿಂಗ್ ಹೊಂದಿರುತ್ತದೆ. ಈ ಕ್ಷಿಪಣಿಗಳ ತೂಕ ಸುಮಾರು 1500 ಕಿ.ಗ್ರಾಂ. ಕಾರ್ಯಾಚರಣೆಯ ಅವಶ್ಯಕತೆಗಳನ್ನು ಅವಲಂಬಿಸಿ ನಿರ್ಭಯಾ 24 ವಿಭಿನ್ನ ರೀತಿಯ ಸಿಡಿತಲೆಗಳನ್ನು ತಲುಪಿಸಬಹುದೆಂದು ತಜ್ಞರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.