ನವದೆಹಲಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿಯವರು, ಅವರು ರಚಿಸಿದ ಸಂವಿಧಾನದ ಕಾರಣದಿಂದಲೇ ಸಾಮಾನ್ಯ ಕುಟುಂಬದಿಂದ ಬಂದವರು ಇಂದು ಪ್ರಧಾನಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಾಗಿದ್ದಾರೆ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರತಿಪಕ್ಷಗಳ ಮೈತ್ರಿಯ ವಿರುದ್ಧ ಕಿಡಿಕಾರಿದ ಮೋದಿಯವರು, 40 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗದವರು ಪ್ರಧಾನಿಗಳಾಗುವ ಕನಸನ್ನು ಕಾಣುತ್ತಿದ್ದಾರೆ ಎಂದರು.
‘ಹಿಂದುಳಿದ ಮತ್ತು ದೌರ್ಜನ್ಯಕ್ಕೊಳಗಾದ ವ್ಯಕ್ತಿಯೊಬ್ಬರು ಇಂದು ರಾಷ್ಟ್ರಪತಿಗಳಾಗಿದ್ದಾರೆ, ರೈತ ಕುಟುಂಬದಿಂದ ಬಂದವರು ಉಪರಾಷ್ಟ್ರಪತಿಯಾಗಿದ್ದಾರೆ, ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕಿರುವ ತಾಕತ್ತು’ ಎಂದಿದ್ದಾರೆ.
‘ಬಾಬಾ ಸಾಹೇಬ್ ಅವರ ಸಂವಿಧಾನಕ್ಕೆ ಧನ್ಯವಾದಗಳು, ಚಾಯ್ವಾಲ್ ಇಂದು ಪ್ರಧಾನಿಯಾಗಿದ್ದಾನೆ’ ಎಂದಿದ್ದಾರೆ.
‘ಮಹಾಮಿಲಾವಟ್ ಶೀಘ್ರವೇ ಮಹಾಗಿರಾವಟ್ ಅನ್ನು ಎದುರಿಸಲಿದೆ, ಅವರು ಕೆಳಕ್ಕೆ ಬೀಳುವುದು ಖಚಿತ’ ಎಂದಿದ್ದಾರೆ.
‘ನಿಮ್ಮ ಬೆಂಬಲದೊಂದಿಗೆ ನಿಮ್ಮ ಚೌಕಿದಾರ್, ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯಲು ಪ್ರಯತ್ನಿಸಿದ್ದಾನೆ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ಕಾರ್ಯನಿರ್ವಹಿಸಿದ್ದೇವೆ’ ಎಂದಿದ್ದಾರೆ.
ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಕ್ಷೇತ್ರಗಳನ್ನು ‘ಪಂಚತೀರ್ಥ’ಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.