2014 ರ ಚುನಾವಣೆಯ ಮತ ಹಂಚಿಕೆಯ ಆಧಾರದ ಮೇಲೆ 2019 ಮೈತ್ರಿ ಪಕ್ಷಗಳ ಮತ ಹಂಚಿಕೆಯ ಪ್ರಮಾಣವನ್ನು ಲೆಕ್ಕ ಹಾಕಿದಾಗ ಆಂಧ್ರ ಮತ್ತು ತೆಲಂಗಾಣದಲ್ಲಿನ ಅಲ್ಪ ನಷ್ಟಗಳ ಹೊರತಾಗಿಯೂ ಬಿಜೆಪಿ ತನ್ನ 32 ಸ್ಥಾನಗಳನ್ನು ಉಳಿಸಿಕೊಳ್ಳಲಿದೆ. ಬಿಜೆಪಿಯ ಜೊತೆ ಮೈತ್ರಿ ಕಡಿದುಕೊಂಡ ಪರಿಣಾಮ ಮೊದಲ ಹಂತದ ಮತದಾನದಲ್ಲಿ ಟಿಡಿಪಿ ಪಕ್ಷವು ಅತಿ ಹೆಚ್ಚು ನಷ್ಟ ಅನುಭವಿಸುವ ಪಕ್ಷವೆಂದು ತೋರುತ್ತಿದೆ.
ಇದು ಇಂಟರ್ಯಾಕ್ಟಿವ್ ಮ್ಯಾಪ್. ವಿವರಗಳನ್ನು ತಿಳಿಯಲು ವರ್ಷ ಅಥವಾ ಕ್ಷೇತ್ರಕ್ಕೆ ಕ್ಲಿಕ್ ಮಾಡಿ
ಇಂಟರ್ಯಾಕ್ಟಿವ್ ಮ್ಯಾಪ್ 2014ರ ಮತ ಹಂಚಿಕೆಯನ್ನು 2019ರ ಮೈತ್ರಿಯ ಆಧಾರದಲ್ಲಿ ಬಿಂಬಿಸಿದೆ. ಅದರ ಪ್ರಕಾರ, ಬಿಜೆಪಿಯು ತೆಲಂಗಾಣದ ಸಿಕಂದರಾಬಾದ್ ಕ್ಷೇತ್ರದಲ್ಲಿ ಮತ್ತು ಆಂಧ್ರದ ವಿಶಾಖಪಟ್ಟಣಂ ಮತ್ತು ನರ್ಸಪುರಂನಲ್ಲಿ, ಉತ್ತರಪ್ರದೇಶದ ಬಾಗ್ಪಾತ್ ಮತ್ತು ಬಿಜನೋರ್ ಕ್ಷೇತ್ರದಲ್ಲಿ ಸೋಲಲಿದೆ. ಆದರೆ ಮೈತ್ರಿ ಬದಲಾವಣೆಯ ಹೊರತಾಗಿಯೂ ತನ್ನ ಸ್ಥಾನಗಳನ್ನು ಎಲ್ಲ ಕಡೆಯೂ ಅದು ಉಳಿಸಿಕೊಳ್ಳಲಿದೆ. ತ್ರಿಪುರಾ, ಮಣಿಪುರ ಮತ್ತು ಪಶ್ಚಿಮಬಂಗಾಳದಲ್ಲಿ ಬಿಜೆಪಿ ಗಳಿಕೆ ಕಾಣುವ ನಿರೀಕ್ಷೆ ಇದೆ. ತ್ರಿಪುರಾದಲ್ಲಿ ಬಿಜೆಪಿಯು ಎಡ ಆಡಳಿತವನ್ನು ಕೆಳಗಿಳಿಸಿ ಅಧಿಕಾರಕ್ಕೆ ಬಂದಿದೆ. ಮಣಿಪುರದಲ್ಲೂ ಬಿಜೆಪಿ ಆಡಳಿತವಿದೆ. ಮಣಿಪುರದ ಹೊರವಲಯದ ಸ್ಥಾನವನ್ನು ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ.
ಪಶ್ಚಿಮಬಂಗಾಳದ ಅಲಿಪುರ್ದ್ವಾರ್ ಕ್ಷೇತ್ರದಲ್ಲಿ 2014ರಲ್ಲಿ ಬಿಜೆಪಿಗೆ ಸಿಕ್ಕಿದ ಮತ ಶೇ.27.41 ಮತ್ತು ಗೆಲುವು ಸಾಧಿಸಿದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗೆ ಸಿಕ್ಕಿದ ಮತ ಶೇ.29.58. ಈ ಅತೀ ಕಡಿಮೆ ಅಂತರವನ್ನು ಮತ್ತು ಇತ್ತೀಚಿಗೆ ಆ ರಾಜ್ಯದಲ್ಲಿ ಬಿಜೆಪಿ ಪಡೆಯುತ್ತಿರುವ ಬೆಂಬಲವನ್ನು ಗಮನಿಸಿದರೆ, ಆ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಜಯಿಸಿದರೆ ಆಶ್ಚರ್ಯವೇನಲ್ಲ. ಕೂಚ್ ಬೆಹರ್ ಕ್ಷೇತ್ರವನ್ನೂ ಗೆಲ್ಲಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ. ಈ ಎರಡೂ ಕ್ಷೇತ್ರಗಳು ಬಾಂಗ್ಲಾದೇಶದ ಗಡಿಯಲ್ಲಿವೆ ಮತ್ತು ಟಿಎಂಸಿಯ ಓಲೈಕೆಯ ನಿಯಮದ ವಿರುದ್ಧ ಇಲ್ಲಿನ ಜನರು ಭಯಗೊಂಡಿದ್ದಾರೆ ಎಂಬುದು ಪ್ರಚಾರದ ವೇಲೆ ತಿಳಿದು ಬಂದಿದೆ. ಇದೇ ಕಾರಣಕ್ಕೆ ಬಿಜೆಪಿಯು ಮಾಜಿ ತೃಣಮೂಲಕ ಯುವ ನಾಯಕ ನಿಶಿತ್ ಪ್ರಾಮಾಣಿಕ್ ಅವರನ್ನು ಕೂಚ್ ಬೆಹರ್ನಲ್ಲಿ ಕಣಕ್ಕಿಳಿಸಿದೆ, ತೃಣಮೂಲಕ ಕಾಂಗ್ರೆಸ್ ಪರೇಶ್ ಅಧಿಕಾರಿಯವರನ್ನು ಕಣಕ್ಕಿಳಿಸಿದೆ.
ಅರುಣಾಚಲಪ್ರದೇಶದ ಎರಡೂ ಕ್ಷೇತ್ರಗಳನ್ನು ಮತ್ತು ಮೇಘಾಲಯದ ಒಂದು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. ಬಿಜೆಪಿ ಗೆಲುವಿನತ್ತ ಅಥವಾ 2014ರಲ್ಲಿ 91 ಕ್ಷೇತ್ರಗಳ ಪೈಕಿ 32 ರಲ್ಲಿ ಗೆದ್ದಿದ್ದಕ್ಕಿಂತಲೂ 2019ರ ಎಪ್ರಿಲ್ 11ರಲ್ಲಿ ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಹೆಚ್ಚಿನ ಮತ ಹಂಚಿಕೆಯನ್ನು ಪಡೆಯುವತ್ತ ಗುರಿ ನೆಟ್ಟಿದೆ.
ಟಿಡಿಪಿ ಮತ್ತು ಬಿಜೆಪಿಯ ಮೈತ್ರಿ ಒಡೆದು ಹೋಗಿರುವುದರಿಂದ ಹೆಚ್ಚಿನ ಲಾಭವಾಗಿದ್ದು ವೈ. ಎಸ್. ಆರ್. ಕಾಂಗ್ರೇಸ್ಗೆ. 2014ರ ಮತ ಹಂಚಿಕೆಯನ್ನು ಅದು ಉಳಿಸಿಕೊಳ್ಳುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.