ಅಹ್ಮದಾಬಾದ್: ದೇಶದ್ರೋಹದ ಕಾನೂನನ್ನು ಕೈಬಿಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ, ಒಂದು ವೇಳೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕಾನೂನನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಗುಜರಾತಿನ ಕಚ್ಛ್ ಜಿಲ್ಲೆಯ ಗಾಂಧೀಧಾಮ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಂದು ವೇಳೆ ಭಾರತವನ್ನು ಯಾರಾದರು ಒಡೆಯಲು ಯತ್ನಿಸಿದರೆ ಅವರನ್ನು ಕ್ಷಮಿಸಲು ಸಾಧ್ಯವೇ? ಕಾಂಗ್ರೆಸ್ ಹೇಳುತ್ತದೆ ದೇಶದ್ರೋಹದ ಕಾನೂನನ್ನು ರದ್ದು ಮಾಡುತ್ತೇವೆ ಎಂದು, ಯಾರಿಗೆ ಅವರು ಈ ಮೂಲಕ ಸಿಗ್ನಲ್ ರವಾನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾನೂನನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ’ ಎಂದಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿಯ ಬೇಡಿಕೆಯನ್ನಿಟ್ಟಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ವಿರುದ್ಧ ಕಿಡಿಕಾರಿರುವ ಅವರು, ಅಂತಹ ಬೇಡಿಕೆಗಳು ಮುಂದುವರೆದರೆ ನಮಗೆ ಕಲಂ 370 ಮತ್ತು 35ಎ ಅನ್ನು ರದ್ದುಪಡಿಸದೆ ನಮಗೆ ಬೇರೆ ಆಯ್ಕೆಗಳೇ ಇರುವುದಿಲ್ಲ ಎಂದಿದ್ದಾರೆ.
ಒಂದು ವೇಳೆ 2007ರಲ್ಲೇ ಭಾರತ ಸ್ಯಾಟಲೈಟ್ ವಿರೋಧಿ ಕ್ಷಿಪಣಿಯನ್ನು ಉತ್ಪಾದಿಸಲು ಸಮರ್ಥವಾಗಿದ್ದರೆ, ಯಾಕೆ ಮನಮೋಹನ್ ಸಿಂಗ್ ಯಾಕೆ ವಿಜ್ಞಾನಿಗಳನ್ನು ಪರೀಕ್ಷಿಸಲು ಬಿಡಲಿಲ್ಲ ಎಂದು ಪ್ರಶ್ನಿಸಿದರು.
‘ರಷ್ಯಾ, ಚೀನಾ ಮತ್ತು ಅಮೆರಿಕಾದ ಬಳಿ ಮಾತ್ರ ತಂತ್ರಜ್ಞಾನವಿತ್ತು. ಯಾವಾಗ ಮನಮೋಹನ್ ಸಿಂಗ್ ಅವರನ್ನು ವಿಜ್ಞಾನಿಗಳು ಭೇಟಿಯಾಗಿ ಒಪ್ಪಿಗೆ ಕೇಳಿದರೋ, ಆವಾಗ ಆ ಮೂರು ದೇಶಗಳಿಗೆ ಬೇಸರವಾಗಬಹುದು, ಪರೀಕ್ಷೆ ಮಾಡುವುದು ಬೇಡ ಎಂದು ಸಿಂಗ್ ವಿಜ್ಞಾನಿಗಳಿಗೆ ಹೇಳಿದ್ದರು. ಆದರೆ ಯಾವಾಗ ವಿಜ್ಞಾನಿಗಳು ಮೋದಿಯನ್ನು ಸಂಪರ್ಕಿಸಿದರೋ, ಅವರು ತಕ್ಷಣವೇ ಅನುಮತಿಯನ್ನು ನೀಡಿದರು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.