ನವದೆಹಲಿ: ಕೇರಳದ ತ್ರಿಶೂರ್ ಪೂರಂ ಉತ್ಸವದಲ್ಲಿ ಪಟಾಕಿಗಳನ್ನು ಹೊಡೆಯಲು ಸುಪ್ರೀಂಕೋರ್ಟ್ ಅನುಮತಿಯನ್ನು ನೀಡಿದೆ. ತ್ರಿಶೂರಿನ ವಡಕ್ಕುನ್ನಾಥನ್ ದೇಗುಲದಲ್ಲಿ ಪ್ರತಿವರ್ಷ ‘ತ್ರಿಶೂರ್ ಪೂರಂ’ ಜರಗುತ್ತದೆ.
ನ್ಯಾ.ಎಸ್ ಎಬೋಬ್ಡೆ, ಮೋಹನ್ ಎಂ ಶಾಂತನಗೌಡರ್ ಮತ್ತು ಇಂದಿರಾ ಬ್ಯಾನರ್ಜಿ ಅವರ ನೇತೃತ್ವದ ನ್ಯಾಯಪೀಠ ಈ ತೀರ್ಪನ್ನು ಪ್ರಕಟಿಸಿದೆ. ಕೇರಳದ ಕೆಲವು ದೇಗುಲಗಳ ಆಡಳಿತಗಳು ಸುಪ್ರೀಂಗೆ ಅರ್ಜಿ ಸಲ್ಲಿಕೆ ಮಾಡಿದ್ದವು, ಹಿರಿಯ ವಕೀಲ ಆರ್.ಬಸಂತ್ ಇವರನ್ನು ಸುಪ್ರೀಂನಲ್ಲಿ ಪ್ರತಿನಿಧಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘1798 ರಿಂದಲೇ ಅರ್ಜಿದಾರ ದೇಗುಲಗಳು ತ್ರಿಶೂರ್ ಪೂರಂ ಉತ್ಸವವನ್ನು ಆಚರಿಸಿಕೊಂಡು ಬರುತ್ತಿವೆ. ಪಟಾಕಿಗಳನ್ನು ಸಿಡಿಸುವುದು ಈ ಉತ್ಸವದ ಅವಿಭಾಜ್ಯ ಅಂಗವಾಗಿ ಹೋಗಿದೆ ಎಂಬುದು ತಿಳಿದು ಬರುತ್ತದೆ. ಹೀಗಾಗಿ ಪಟಾಕಿಗಳನ್ನು ನಿಷೇಧಿಸಬಾರದು’ ಎಂದು ಹೇಳಿದೆ.
ದೇಗುಲಗಳು ಲೈಸೆನ್ಸ್ ಪಡೆದು ಪಟಾಕಿಗಳ ಉತ್ಪಾದನೆಗೆ ವ್ಯವಸ್ಥೆ ಮಾಡುತ್ತದೆ. ಆದರೆ ದೇಗುಲಗಳು ತಾವು ಉತ್ಪಾದಿಸಿರುವ ಪಟಾಕಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕು, ಯಾವುದೇ ಕಾರಣಕ್ಕೂ ಬೇರೆಯವರಿಗೆ ಪೂರೈಕೆ ಮಾಡಬಾರದು ಎಂದು ನ್ಯಾಯಪೀಠ ಹೇಳಿದೆ.
ಈ ಬಾರಿಯ ತ್ರಿಶೂರ್ ಪೂರಂ ಮೇ 7 ರಿಂದ 14 ರವರೆಗೆ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.