ತಿರುವನಂತಪುರಂ: ಕೇರಳದ ಖ್ಯಾತ ರಾಜಕಾರಣಿ ಮತ್ತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆ ಅತ್ಯಂತ ಸವಾಲಿನದ್ದಾಗಿದೆ. ಕೇರಳದಾದ್ಯಂತ ಭಾರೀ ಹೆಸರು ಮಾಡಿರುವ ಇವರು, ಈ ಬಾರಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಿಪಿಐ ಅಭ್ಯರ್ಥಿಗಳಿಂದ ಕಠಿಣ ಸವಾಲನ್ನು ಎದುರಿಸಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
2014ರಲ್ಲೇ ಅವರು ಭಾರೀ ಕಷ್ಟದಲ್ಲಿ ಗೆದ್ದು ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಒ.ರಾಜಗೋಪಾಲ್ ವಿರುದ್ಧ ಅವರು ಕೇವಲ 15,470 ಮತಗಳಿಂದ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿ ಕುಮ್ಮನಮ್ ರಾಜಶೇಖರನ್ ಅವರನ್ನು ಕಣಕ್ಕಿಳಿಸಿದೆ. ತಿರುವನಂತಪುರಂನಲ್ಲಿ ಹೆಚ್ಚು ಪ್ರಸಿದ್ಧರಿರುವ ವ್ಯಕ್ತಿ ಅವರಾಗಿದ್ದಾರೆ. ಸಿಪಿಐ ಕೂಡ ಕಳೆದ ಬಾರಿ ತರೂರ್ ಅವರಿಗೆ ದೊಡ್ಡ ಸವಾಲನ್ನು ನೀಡಿತ್ತು. ಅದರ ಅಭ್ಯರ್ಥಿ ಪಿ.ರಾಮಚಂದ್ರನ್ ವಿರುದ್ಧ ಕೇವಲ 99,998 ಹೆಚ್ಚು ಮತಗಳನ್ನು ಇವರು ಪಡೆದುಕೊಂಡಿದ್ದರು.
ಆದರೆ ಈ ಬಾರಿ ಅವರ ಸಂಸದನಾಗುವ ಹಾದಿ ಅಪಾಯದಲ್ಲಿದೆ. ಈ ಬಾರಿ ಪ್ರತಿಸ್ಪರ್ಧಿಗಳು ಮಾತ್ರವಲ್ಲ, ಕಾಂಗ್ರೆಸ್ಸಿಗರಿಂದಲೂ ಅವರು ವಿರೋಧವನ್ನು ಎದುರಿಸುತ್ತಿದ್ದಾರೆ. ತನಗೆ ಹೈಕಮಾಂಡ್ ಬೆಂಬಲವನ್ನು ನೀಡುತ್ತಿಲ್ಲ ಎಂದು ತರೂರ್ ದೂರುತ್ತಿದ್ದಾರೆ. ರಾಹುಲ್ ಅವರು ವಾಯನಾಡಿಗೆ ಹೆಚ್ಚಿನ ಗಮನವನ್ನು ನಿಡುತ್ತಿರುವುದರಿಂದ ತರೂರ್ ಕ್ಷೇತ್ರದತ್ತ ಅವರ ಗಮನ ಕಡಿಮೆಯಾಗಿದೆ. ಗೆಲ್ಲುವ ಸಂಭಾವ್ಯತೆ ಇರುವ ಕ್ಷೇತ್ರಗಳನ್ನೂ ಅವರು ಕೈಚೆಲ್ಲುತ್ತಿದ್ದಾರೆ ಎಂದು ತರೂರ್ ಆರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ತರೂರ್ ಅವರಿಗೆ ಈಗಿನಿಂದಲೇ ಸೋಲಿನ ಭಯ ಕಾಡಲು ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.