ನವದೆಹಲಿ: ಬಾಲಾಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ಹಾನಿಗಳಾಗಿಲ್ಲ ಎನ್ನುತ್ತಿರುವ ಪಾಕಿಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ದಾಳಿ ನಡೆದ ಸ್ಥಳಕ್ಕೆ ಆಯ್ದ ಪತ್ರಕರ್ತರನ್ನು ಕೊಂಡೊಯ್ಯಲು ಪಾಕಿಸ್ಥಾನ ಯಾಕೆ 40 ಮಂದಿಯನ್ನು ತೆಗೆದುಕೊಂಡಿತು ಎಂದು ಅವರು ಪ್ರಶ್ನಿಸಿದ್ದಾರೆ.
‘ಎಲ್ಲದಕ್ಕೂ ಮೊದಲು ಆ ದೇಶ ದಾಳಿ ನಡೆದ ಪ್ರದೇಶಕ್ಕೆ ಪತ್ರಕರ್ತರನ್ನು ಕೊಂಡೊಯ್ಯಲು 40 ದಿನಗಳನ್ನು ತೆಗೆದುಕೊಂಡಿತು. ನನ್ನ ಬಳಿ ಇರುವ ಮಾಹಿತಿಯ ಪ್ರಕಾರ, ಅವರು ಪತ್ರಕರ್ತರನ್ನು ದಾಳಿಯೇ ನಡೆಯದ ಮದರಸವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ, ಆ ಮದರಸ ನಮ್ಮ ವಾಯುಸೇನೆಯ ದಾಳಿ ಯೋಜನೆಯ ಭಾಗವೇ ಆಗಿರಲಿಲ್ಲ. ಪತ್ರಕರ್ತರನ್ನು ಪ್ರವಾಸಕ್ಕೆ ಕೊಂಡೊಯ್ದಿರುವ ಆ ದೇಶ, ಅವರನ್ನು ದಾಳಿ ನಡೆದ ಉಗ್ರರ ಶಿಬಿರಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಕಡೆಯೂ ಕರೆದುಕೊಂಡು ಹೋಗಿದೆ’ ಎಂದಿದ್ದಾರೆ.
ಮೋದಿ ಮತ್ತೊಮ್ಮೆ ಬಂದರಷ್ಟೇ ಶಾಂತಿ ಮಾತುಕತೆ ಸಾಧ್ಯ ಎಂಬ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಇಂತಹ ಹೇಳಿಕೆಗಳಿಂದ ನಮ್ಮ ಪ್ರತಿಪಕ್ಷಗಳ ಉತ್ಸಾಹ ಹೆಚ್ಚುತ್ತದೆ ಎಂದಿದ್ದಾರೆ. ಅಲ್ಲದೇ, ಪಾಕಿಸ್ಥಾನಕ್ಕೆ ತೆರಳಿ ಮೋದಿಯನ್ನು ಕಿತ್ತೊಗೆಯಬೇಕು ಎಂದ ಮಣಿಶಂಕರ್ ಅಯ್ಯರ್ ಬಗ್ಗೆ ಕಾಂಗ್ರೆಸ್ಸಿಗರ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದಾರೆ.
ಜನಸಂಘದ ಕಾಲದಿಂದಲೂ ನಮ್ಮಲ್ಲಿ ರಾಷ್ಟ್ರೀಯತೆ ಇದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಆದೇಶಿಸಿದ್ದ ಸರ್ಜಿಕಲ್ ಸ್ಟ್ರೈಕ್ 26/11 ಉಗ್ರರ ದಾಳಿ ಸಂದರ್ಭದಲ್ಲೇ ನಡೆಯಬೇಕಿತ್ತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.