ಚಂಡೀಗಢ: ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಅವರ ಹುಟ್ಟು ಹಬ್ಬದ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ಬಂದ ಆಹ್ವಾನವನ್ನು ಪಂಜಾಬ್ ರಾಜ್ಯಪಾಲ ವಿ.ಕೆ ಸಿಂಗ್ ಅವರು ನಿರಾಕರಿಸುವ ಮೂಲಕ ಅತ್ಯಂತ ದಿಟ್ಟ ನಿಲುವನ್ನು ತೆಗೆದುಕೊಂಡಿದ್ದಾರೆ. ಜಲಿಯನ್ ವಾಲಾ ಭಾಗ್ ನರಮೇಧದ ಹಿನ್ನಲೆಯಲ್ಲಿ ಅವರು ಆಹ್ವಾನವನ್ನು ನಿರಾಕರಿಸಿದ್ದಾರೆ.
ಚಂಡೀಗಢದ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಆ್ಯಂಡ್ರೂ ಐರೆ ಅವರು ರಾಣಿಯ ಜನ್ಮದಿನದ ಔತಣಕೂಟದಲ್ಲಿ ಭಾಗಿಯಾಗುವಂತೆ ರಾಜ್ಯಪಾಲರಿಗೆ ಆಹ್ವಾನವನ್ನು ನೀಡಿದ್ದರು.
‘ಜಲಿಯನ್ ವಾಲಾ ಭಾಗ್ ನರಮೇಧದ 100ನೇ ವಾರ್ಷಿಕೋತ್ಸವದ ಮುನ್ನ ದಿನ ಜನ್ಮದಿನದ ಔತಣಕೂಟದಲ್ಲಿ ಭಾಗಿಯಾಗುವುದು ಒಳ್ಳೆಯ ನಡೆಯಲ್ಲ’ ಎಂದು ಸಿಂಗ್ ಹೇಳಿದ್ದಾರೆ.
‘ಸ್ವಾತಂತ್ರ್ಯ ಬಳಿಕ ಭಾರತ ಮತ್ತು ಬ್ರಿಟನ್ ಉತ್ತಮ ಸಂಬಂಧವನ್ನು ಹೊಂದಿವೆ. ಔತಣಕೂಟದಲ್ಲಿ ಭಾಗಿಯಾಗುವುದನ್ನು ನಾನು ಗೌರವದಿಂದ ಸ್ವೀಕರಿಸುತ್ತಿದ್ದೆ. ಆದರೆ ಇದು ಜಲಿಯನ್ ವಾಲಾಭಾಗ್ ನರಮೇಧ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುತ್ತಿರುವುದರಿಂದ ವಿನಮ್ರವಾಗಿ ಆಹ್ವಾನವನ್ನು ನಿರಾಕರಿಸುತ್ತೇನೆ’ ಎಂದಿದ್ದಾರೆ.
1919ರ ಎಪ್ರಿಲ್ 13ರಂದು ಜಲಿಯನ್ ವಾಲಾ ಭಾಗ್ ನರಮೇಧ ನಡೆದಿತ್ತು. ಘಟನೆ ನಡೆದು ನಾಳೆಗೆ 100 ವರ್ಷವಾಗಲಿದೆ.
ಸಿಂಗ್ ಅವರನ್ನು ಔತಣಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಐರೆ ಅವರು ಕೇಳಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.