ನವದೆಹಲಿ: ದ್ವಿಪಕ್ಷೀಯ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ವೃದ್ಧಿಗೆ ಭಾರತ ಮತ್ತು ನೆದರ್ಲ್ಯಾಂಡ್ ದೇಶಗಳು ಪಣತೊಟ್ಟಿವೆ. ಮಾತ್ರವಲ್ಲದೆ, ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಹಕಾರವನ್ನು ವೃದ್ದಿಸಲು ನಿರ್ಧರಿಸಿವೆ.
ಎರಡು ದೇಶಗಳು ನವದೆಹಲಿಯ ವಿದೇಶಾಂಗ ಕಚೇರಿಯಲ್ಲಿ ಸಮಾಲೋಚನೆಗಳನ್ನು ನಡೆಸಿದ್ದು, ವಿದೇಶಾಂಗ ಸಚಿವಾಲಯದ ಪಶ್ಚಿಮ ಕಾರ್ಯದರ್ಶಿ ಎ. ಗೈತಶ್ ಶರ್ಮಾ ಅವರು ಭಾರತೀಯ ನಿಯೋಗವನ್ನು ಮುನ್ನಡೆಸಿದರು ಮತ್ತು ನೆದರ್ಲ್ಯಾಂಡ್ ನಿಯೋಗವನ್ನು ಅದರ ವಿದೇಶಾಂಗ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಜೋಹಾನ್ನಾ ಬ್ರಾಂಡ್ ಅವರು ಮುನ್ನಡೆಸಿದರು.
ಭಾರತ ಮತ್ತು ನೆದರ್ಲ್ಯಾಂಡ್ ಬಹುಮುಖ ಸಂಬಂಧವನ್ನು ಹಂಚಿಕೊಂಡಿದೆ ಎಂದು MEA ಪ್ರಕಟನೆಯಲ್ಲಿ ಹೇಳಿದೆ.
‘ಉಭಯ ದೇಶಗಳ ನಡುವೆ ನಡೆದ ಸಮಾಲೋಚನೆಯಲ್ಲಿ ರಾಜಕೀಯ, ಆರ್ಥಿಕ, ವಾಣಿಜ್ಯ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಹಕಾರ ವೃದ್ಧಿಗೆ ಒತ್ತು ನೀಡುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ರಾಜಕೀಯ, ಆರ್ಥಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಹಕಾರಗಳ ಉತ್ತೇಜನದ ಬಗ್ಗೆ ಮಾತುಕತೆ ನಡೆಸಲಾಗಿದೆ.
ನವದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ 25ನೇ CII-DST ಟೆಕ್ ಸಮಿತ್ನಲ್ಲಿ ನೆದರ್ಲ್ಯಾಂಡ್ ಪಾಲುದಾರ ದೇಶವಾಗಿ ಭಾಗವಹಿಸುತ್ತಿರುವುದನ್ನು ಭಾರತ ಶ್ಲಾಘಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.