ನವದೆಹಲಿ: ಭಾರತ ಮತ್ತು ಸಂವಿಧಾನವು ಅಪಾಯದಲ್ಲಿದೆ ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ನೀಡದೆ, ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳನ್ನು ಅಧಿಕಾರ ರಹಿತರನ್ನಾಗಿ ಮಾಡಿ ಎಂದು ಮನವಿ ಮಾಡಿಕೊಂಡು ಇತ್ತೀಚಿಗೆ 600 ಮಂದಿ ಕಲಾವಿದರು ಪತ್ರ ಅಭಿಯಾನ ಆರಂಭಿಸಿದ್ದರು. ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಷಾ ಮುಂತಾದವರು ಇದರಲ್ಲಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ಸುಮಾರು 900 ಕಲಾವಿದರು ಮೋದಿ ಪರವಾಗಿ ಪತ್ರ ಅಭಿಯಾನ ಆರಂಭಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನೊಂದು ಅವಧಿಗೂ ಮುಂದುವರೆಯುವುದು ಅತ್ಯಂತ ಅಗತ್ಯ ಎಂಬುದು ನಮ್ಮ ದೃಢ ನಂಬಿಕೆಯಾಗಿದೆ. ಅಲ್ಲದೆ, ಎಲ್ಲಕ್ಕೂ ಪ್ರಾಮುಖ್ಯವಾಗಿ ಭಯೋತ್ಪಾದನೆಯಂತಹ ಸವಾಲುಗಳು ನಮ್ಮೆದುರಿಗಿದ್ದಾಗ ನಮಗೆ ‘ಮಜ್ಬೂತ್ ಸರ್ಕಾರ್’ (ಬಲಿಷ್ಠ ಸರ್ಕಾರ) ಬೇಕೇ ವಿನಃ ಒಂದು ‘ಮಜುಬೂರ್ ಸರ್ಕಾರ್’ (ದುರ್ಬಲ ಸರ್ಕಾರ) ಅಲ್ಲ, ಹಾಗಾಗಿ ಇಂದಿನ ಸರಕಾರವೇ ಮುಂದುವರಿಯಬೇಕು ಎಂದು ಪತ್ರ ಅಭಿಯಾನದಲ್ಲಿ ಹೇಳಲಾಗಿದೆ.
ಅಲ್ಲದೆ ಕಳೆದ 5 ವರ್ಷಗಳಲ್ಲಿ ಭಾರತವು ‘ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಅಭಿವೃದ್ಧಿ ಆಧಾರಿತ ಆಡಳಿತ’ ವನ್ನು ನೀಡಿದ ಸರ್ಕಾರವನ್ನು ಕಂಡಿದೆ ಎಂದು ಜಂಟಿ ಹೇಳಿಕೆಯು ತಿಳಿಸಿದೆ.
ಮೋದಿಯವರನ್ನೇ ಬೆಂಬಲಿಸೋಣ ಎಂದು ಪಂಡಿತ್ ಜರ್ಸಾಜ್, ಶಂಕರ್ ಮಹಾದೇವನ್, ವಿವೇಕ್ ಒಬೆರಾಯ್, ರೀತಾ ಗಂಗೂಲಿ ಸೇರಿದಂತೆ ಪ್ರಮುಖ ಕಲಾವಿದರು ಸೇರಿಂದತೆ ಸುಮಾರು 900 ಕ್ಕೂ ಹೆಚ್ಚು ಕಲಾವಿದರು ಪತ್ರ ಕರೆ ನೀಡಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕರ್ನಾಟಕದ ಪ್ರಸಿದ್ಧ ಕಥಕ್ ನೃತ್ಯಗಾರರಾದ ನಿರೂಪಮಾ ಮತ್ತು ರಾಜೇಂದ್ರ, ಅಭ್ಯರ್ಥಿ ಲೆಕ್ಕಿಸದೇ ಮೋದಿ ಅವರಿಗಾಗಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.
ತ್ರಿಲೋಕಿನಾಥ್ ಮಿಶ್ರಾ, ಕೋಯಿನಾ ಮಿತ್ರಾ, ಅನುರಾಧಾ ಪೋಡ್ವಾಲ್, ಹನ್ಸ್ ರಾಜ್ ಹನ್ಸ್, ಮಲಿನಿ ಅವಸ್ಥಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಮೋದಿಯವರ ಪರವಾಗಿ ನಿಂತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.