ನವದೆಹಲಿ: ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ಅಂಗವಾಗಿ, ಬಿಜೆಪಿ ಸಮರ್ಪಣಾ ದಿವಸವನ್ನು ಆಚರಣೆ ಮಾಡುತ್ತಿದೆ. ಬಿಜೆಪಿ ಸಂಸ್ಥಾಪಕರಾದ ಪಂಡಿತ್ ಅವರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.
ಸಮರ್ಪಣಾ ದಿನದ ಅಂಗವಾಗಿ, ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ರಾಜಕಾರಣದಲ್ಲಿ ಶುದ್ಧ ಹಣವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಪಕ್ಷಕ್ಕೆ ದೇಣಿಗೆಯನ್ನು ನೀಡುವಂತೆ ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಮೋ ಆ್ಯಪ್ ಮೂಲಕ ಅಥವಾ ಚೆಕ್ ಮೂಲಕ ಪಕ್ಷಕ್ಕೆ ದೇಣಿಗೆಯನ್ನು ನೀಡುತ್ತಿದ್ದಾರೆ.
ಫೆ.12ರಿಂದ ಮಾರ್ಚ್ 2ರವರೆಗೆ ‘ಮೇರಾ ಪರಿವಾರ್ ಬಾಜಪಾ ಪರಿವಾರ್’ ಎಂಬ ಕಾರ್ಯಕ್ರಮವನ್ನೂ ಬಿಜೆಪಿ ಆಯೋಜನೆಗೊಳಿಸುತ್ತಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳಲ್ಲಿ ಬಿಜೆಪಿ ಧ್ವಜವನ್ನು ಹಾರಿಸಲಿದ್ದಾರೆ.
ಸಮರ್ಪಣಾ ದಿನದ ಅಂಗವಾಗಿ ಟ್ವಿಟ್ ಮಾಡಿರುವ ಮೋದಿ, ‘ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮೆರೆದವರು, ಇಂದು ಅವರ ಪುಣ್ಯತಿಥಿ. ಇದರ ಅಂಗವಾಗಿ, ರಾಜಕೀಯದಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ಶುದ್ಧ ಹಣವನ್ನು ಉತ್ತೇಜಿಸಲು ಬಿಜೆಪಿ ಸಮರ್ಪಣಾ ದಿನವನ್ನು ಆಚರಿಸುತ್ತಿದೆ. ಎಲ್ಲರೂ ಪಕ್ಷಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ನಮೋ ಆ್ಯಪ್ ಇದಕ್ಕೆ ಅತೀ ಸುಲಭ ವಿಧಾನ. ನಾನೂ ನನ್ನ ಕೊಡುಗೆಯನ್ನು ನೀಡಿದ್ದೇನೆ’ ಎಂದಿದ್ದಾರೆ.
Deen Dayal Ji emphasised on honesty in public life. Today on his Punya Tithi, BJP is starting a movement #SamarpanDivas to further transparency and clean money in politics. Urging you all to donate to the Party. The NaMo App is an easy way to do so. I too made my contribution. pic.twitter.com/k5DCukrH4X
— Narendra Modi (@narendramodi) February 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.