ನವದೆಹಲಿ: ಭಾರತೀಯ ವಾಯುಸೇನಾ ಪೈಲೆಟ್ಗಳ ಬಗ್ಗೆ ಅವಮಾನಕರವಾಗಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಿಡಿಕಾರಿದ್ದು, ರಾಜಕೀಯ ಮಾಡಿ ಆದರೆ ಸೇನೆಯನ್ನು ಅವಮಾನಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ವಾಯುಸೇನೆ ಪೈಲೆಟ್ಗಳು ಸತ್ತಾಗ ಅವರಿಗೆ 30 ಸಾವಿರ ಕೋಟಿ ರೂಪಾಯಿಗಳನ್ನು ನೀಡಬಹುದಿತ್ತು ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಮಿಲಿಟರಿಗೆ ಮಾಡಿದ ಅವಮಾನ ಎಂದು ರಾಥೋಡ್ ಹೇಳಿದ್ದಾರೆ.
ಟ್ವಿಟರ್ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ರಾಥೋಡ್, ‘ನಿಮಗೆ ನಮ್ಮ ಸೇನೆಯ ಬಗ್ಗೆ ಏನೂ ತಿಳಿದಿಲ್ಲ. ಎಂದಿನಂತೆ ದೆಹಲಿಯಲ್ಲಿ ಕುಳಿತು ಪತ್ರಿಕಾಗೋಷ್ಠಿಯ ಆಟವಾಡುವ ಸಂದರ್ಭ ನೀವು ಸೇನೆಯನ್ನು ಅವಮಾನಿಸಿದ್ದೀರಿ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಮ್ಮ ಸೇನೆ ಮತ್ತು ಹುತಾತ್ಮರನ್ನು ಗೌರವಿಸುತ್ತಾರೆ. ನಮ್ಮ ಸೈನಿಕರು ತಮ್ಮ ತಾಯ್ನಾಡಿಗಾಗಿ ಹೋರಾಡುತ್ತಾರೆಯೇ ಹೊರತು ಹಣಕ್ಕಾಗಿ ಅಲ್ಲ. ಸ್ವಾಭಿಮಾನಕ್ಕಾಗಿ, ದೇಶದ ರಕ್ಷಣೆಗಾಗಿ ನಮ್ಮ ಯೋಧರು ನಿತ್ಯ ಹೋರಾಡುತ್ತಾರೆ’ ಎಂದಿದ್ದಾರೆ.
‘ನೀವು ರಾಜಕೀಯ ಮಾಡಿ ಆದರೆ ಎಂದಿಗೂ ಭಾರತೀಯ ಸೇನೆ ಮತ್ತು ಸೈನಿಕರನ್ನು ಅವಮಾನಿಸಬೇಡಿ. ಒಬ್ಬ ಸೈನಿಕನಾಗಿ ಈ ಮಾತನ್ನು ನಿಮಗೆ ಹೇಳುತ್ತಿದ್ದೇನೆ’ ಎಂದಿದ್ದಾರೆ.
क्या @RahulGandhi से कोई भी उम्मीद की जा सकती है? pic.twitter.com/mgR0Tn6m16
— Rajyavardhan Rathore (@Ra_THORe) February 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.