ನವದೆಹಲಿ: ಕೃಷಿ ವಲಯಕ್ಕೆ ಆರ್ಬಿಐ ಸಂತೋಷದ ಸುದ್ದಿಯನ್ನು ನೀಡಿದೆ. ರೂ 1.6 ಲಕ್ಷದವರೆಗೆ ಕೃಷಿ ಸಾಲವನ್ನು ಪಡೆಯಲು ಸ್ವತ್ತು ಗಿರವಿ ಇಡಬೇಕಾಗಿಲ್ಲ. ಪ್ರಸ್ತುತ 1 ಲಕ್ಷ ರೂಪಾಯಿವರೆಗೆ ಇದ್ದ ಮಿತಿಯನ್ನು ಈಗ 1.6 ಲಕ್ಷದವರೆಗೆ ವಿಸ್ತರಣೆ ಮಾಡಲಾಗಿದೆ. 2010ನೇ ಇಸವಿಯಲ್ಲಿ 50 ಸಾವಿರ ರೂಪಾಯಿ ಇದ್ದ ಮಿತಿಯನ್ನು 1ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು.
ಆರ್ಬಿಐನ ಹೊಸ ಕ್ರಮವು ಕೃಷಿ ವಲಯದ ದ್ರವ್ಯತೆಯನ್ನು ಏರಿಕೆ ಮಾಡಲಿದೆ ಮತ್ತು ಇನ್ಪುಟ್ ಸಂಬಂಧಿತ ಕ್ರೆಡಿಟ್ ಸಮಸ್ಯೆಯನ್ನು ನಿರ್ಮೂಲನೆ ಮಾಡಲಿದೆ. 2010ರಿಂದ ಸಮಗ್ರ ಹಣದುಬ್ಬರ ಮತ್ತು ಕೃಷಿ ಇಳುವರಿ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
2018ರ ಡಿಸೆಂಬರ್ವರೆಗೆ ಸರ್ಕಾರ 11 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲವನ್ನು ವಿತರಿಸಿತ್ತು. ಬಹುತೇಕ ಈ ಸಾಲಗಳು ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಿಗೆ ಬಿಡುಗಡೆಗೊಳಿಸಲಾಗಿದೆ. ಕೆ.ಸಿ.ಸಿ ವಿರುದ್ಧ 3 ಲಕ್ಷ ರೂಪಾಯಿಗಳವರೆಗೆ ಬೆಳೆ ಸಾಲಗಳ ಎಲ್ಲ ದಾಖಲಾತಿಗಳನ್ನು ತೆಗೆದುಹಾಕಲು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.
ಮಧ್ಯಂತರ ಬಜೆಟ್ 2019-20ರಲ್ಲಿ, 2 ಹೆಕ್ಟೇರ್ಗಳಷ್ಟು ಭೂ ಮಾಲೀಕರಿಗೆ ವರ್ಷಕ್ಕೆ 6,000 ರೂ. ನೇರ ಲಾಭವನ್ನು ವರ್ಗಾಸುವುದಾಗಿ ಮೋದಿ ಸರ್ಕಾರ ಘೋಷಿಸಿದೆ .2019-20ರಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂಬ ಹೆಸರಿನ ಈ ಯೋಜನೆಗೆ ಒಟ್ಟು ಮೊತ್ತ 75,000 ಕೋಟಿ ರೂ. ವ್ಯಯವಾಗಲಿದೆ. ಇದನ್ನು 2018 ರ ಡಿಸೆಂಬರ್ 1 ರಿಂದ ಪೂರ್ವಸ್ಥಿತಿಗೆ ಅನುಗುಣವಾಗಿ ಜಾರಿಗೊಳಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.