ನವದೆಹಲಿ: ಪಾಕಿಸ್ಥಾನ ಕಾಶ್ಮೀರ ವಿಷಯದ ಬಗ್ಗೆ ಲಂಡನ್ನಲ್ಲಿ ಆಯೋಜನೆಗೊಳಿಸಿದ್ದ ಕಾರ್ಯಕ್ರಮ ವೈಫಲ್ಯ ಕಾಣುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಪಾಕ್ ವಿದೇಶಾಂಗ ಸಚಿವ ಶಾ ಮೆಹಮ್ಮೂದ್ ಖುರೇಶಿ ಆಯೋಜನೆಗೊಳಿಸಿದ್ದ ಕಾರ್ಯಕ್ರಮದಲ್ಲಿ ಬ್ರಿಟನ್ ಸರ್ಕಾರದ ಒಬ್ಬರೇ ಒಬ್ಬರು ಭಾಗಿಯಾಗದೇ ಇರುವುದು ಪಾಕ್ಗೆ ಮುಖಭಂಗವನ್ನುಂಟು ಮಾಡಿದೆ.
ಭಾರತವು ತನ್ನ ರಾಜತಾಂತ್ರಿಕ ಮಾಧ್ಯಮದ ಮೂಲಕ, ಯುಕೆ ನೆಲದಲ್ಲಿ ಪಾಕಿಸ್ಥಾನ ಆಯೋಜನೆಗೊಳಿಸಿದ್ದ ಕಾರ್ಯಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸಿತ್ತು. ಭಾರತ ವಿರೋಧಿ ಕೃತ್ಯಗಳಿಗೆ ತನ್ನ ನೆಲ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಯುಕೆಗೆ ಮನವಿ ಮಾಡಿಕೊಂಡಿತ್ತು.
ಇದಕ್ಕೆ ಸ್ಪಂದಿಸಿದ್ದ ಯುಕೆ, ತನ್ನ ನೆಲದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳದಂತೆ ಯಾರಿಗೂ ಹೇಳಲು ಸಾಧ್ಯವಿಲ್ಲ, ಆದರೆ ಯಾವುದೇ ಅಧಿಕೃತ ಭಾಗಿತ್ವ ಇಲ್ಲದಂತೆ ನೋಡಿಕೊಳ್ಳುತ್ತೇವೆ ಮತ್ತು ಖುರೇಷಿ ಭೇಟಿಯನ್ನು ಖಾಸಗಿ ಭೇಟಿ ಎಂದು ಪರಿಗಣಿಸುತ್ತೇವೆ ಎಂದಿತ್ತು. ಅದರಂತೆಯೇ ಅದು ನಡೆದುಕೊಂಡಿದೆ.
ಒಂದು ದೇಶಕ್ಕೆ ವಿದೇಶಾಂಗ ಸಚಿವರು ಭೇಟಿ ನೀಡಿ, ದ್ವಿಪಕ್ಷೀಯ ಮಾತುಕತೆ ಇಲ್ಲದೆ ವಾಪಾಸ್ ಬರುವುದು ಅಸಹಜ ವಿಷಯ, ಆದರೆ ಖುರೇಶಿ ವಿಷಯದಲ್ಲಿ ಇದು ನಿಜವಾಗಿದೆ. ಖಾಸಗಿ ವ್ಯಕ್ತಿಯಂತೆ ಹೋಗಿ, ಕಾಶ್ಮೀರದ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿ ಬಂದಿದ್ದಾರೆ.
ಲಂಡನ್ನಲ್ಲಿನ ಕಾರ್ಯಕ್ರಮ ಅಲ್ಲಿನ ಸರ್ಕಾರದ ಸಹಕಾರ ಇಲ್ಲದೆ ವೈಫಲ್ಯ ಕಂಡಿರುವುದು ಭಾರತದ ಮಟ್ಟಿಗೆ ಸಕಾರಾತ್ಮಕ ವಿಷಯವಾಗಿದೆ. ಕಾಶ್ಮೀರವನ್ನು ಪ್ರಸ್ತಾಪಿಸಿ ವಿಶ್ವ ವೇದಿಕೆಯಲ್ಲಿ ಭಾರತವನ್ನು ಅವಮಾನಿಸುವ ಪಾಕ್ ಷಡ್ಯಂತ್ರ ಧ್ವಂಸವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.