ಲಕ್ನೋ: ಶ್ರೀರಾಮ ಹುಟ್ಟಿರುವ ಅಯೋಧ್ಯೆಯ ’ಅದೇ ಪ್ರದೇಶ, ಅದೇ ಜಾಗ’ದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ, ಈ ಬಗ್ಗೆ ಯಾವ ಗೊಂದಲವೂ ಬೇಡ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪುನರುಚ್ಚರಿಸಿದ್ದಾರೆ.
ಬಿಹಾರದ ಪುರ್ನೆಯದಲ್ಲಿ ಬಿಜೆಪಿ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ರಾಮಜನ್ಮಭೂಮಿಗೆ ಆಗಮಿಸುವವರು ಫೈಝಾಬಾದ್ ಜಿಲ್ಲೆಗೆ ಅಲ್ಲ, ಅಯೋಧ್ಯಾಗೆ ಆಗಮಿಸುತ್ತಿದ್ದಾರೆ. ಕುಂಭ ಮೇಳಕ್ಕೆ ಬರುವ ಭಕ್ತಾದಿಗಳು ಅಲಹಾಬಾದ್ಗೆ ಅಲ್ಲ, ಪ್ರಯಾಗ್ರಾಜ್ಗೆ ಆಗಮಿಸುತ್ತಿದ್ದಾರೆ ಎಂದರು. ಈ ಮೂಲಕ ತಮ್ಮ ಸರ್ಕಾರದ ಸ್ಥಳಗಳ ಮರುನಾಮಕರಣ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು.
‘ಮುಂಬರುವ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳು ಉತ್ತರಪ್ರದೇಶದಲ್ಲಿ ಜರುಗಲಿವೆ. ತಲೆ ಕೆಡಿಸಿಕೊಳ್ಳಬೇಡಿ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ದೇಗುಲ ಅದೇ ಪ್ರದೇಶ, ಅದೇ ಜಾಗದಲ್ಲಿ ನಿರ್ಮಾಣವಾಗಲಿದೆ, ಆ ಬಗ್ಗೆ ಯಾವ ಗೊಂದಲವೂ ಬೇಡ’ ಎಂದರು.
ಬಿಹಾರ ಸೀತಾ ಮಾತೆಯ ಜನ್ಮಸ್ಥಳ ಎಂಬುದನ್ನು ಸ್ಮರಿಸಿದ ಅವರು, ಅಲ್ಲಿನ ಪ್ರತಿಪಕ್ಷ ರಾಷ್ಟ್ರೀಯ ಜನತಾ ದಳದ ವಿರುದ್ಧ ಟೀಕಾಪ್ರಹಾರ ಮಾಡಿದರು. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಪಕ್ಷ ‘ಬಿಹಾರಿ’ ಎಂದು ಕರೆಸಿಕೊಳ್ಳಲು ಅವಮಾನ ಎನಿಸುವಂತೆ ಮಾಡಿ ಹಾಕಿದ್ದಾರೆ ಎಂದರು.
ಅಲ್ಲದೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಇವರು, ಇಬ್ಬರೂ ಬಿಹಾರದ ಚಿತ್ರಣವನ್ನು ನಿಧಾನಕ್ಕೆ ಬದಲಾಯಿಸುತ್ತಿದ್ದಾರೆ ಎಂದರು.
‘ಅನೇಕ ಬದಲಾವಣೆಗಳು ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಆಗುತ್ತಿದೆ. ಪ್ರವಾಸಿ ಭಾರತೀಯ ಸಮ್ಮೇಳನಕ್ಕೆ ಆಗಮಿಸಿದ ಹಲವಾರು ಅನಿವಾಸಿ ಭಾರತೀಯರು, ಮೋದಿ ನಾಯಕತ್ವದಲ್ಲಿ ಭಾರತ ಗಳಿಸುತ್ತಿರುವ ಹೊಸ ಗುರುತಿಸುವಿಕೆಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ’ ಎಂದು ಯೋಗಿ ತಿಳಿಸಿದ್ದಾರೆ.
‘ನಾವು ದೇಶವನ್ನು ಒಡೆಯುವ ಬಗ್ಗೆ ಮಾತನಾಡುವವರ ಬೆಂಬಲಕ್ಕೆ ನಿಲ್ಲುವ ಪ್ರತಿಪಕ್ಷಗಳಂತೆ ಅಲ್ಲ. ನಮ್ಮ ಒಬ್ಬ ಯೋಧ ಸತ್ತರೆ ಶತ್ರುಗಳ 100 ಸೈನಿಕರು ಸಾಯಬೇಕೆಂದು ಬಯಸುವವರು ನಾವು’ ಎಂದಿದ್ದಾರೆ.
ನನ್ನ ಆಡಳಿತದಲ್ಲಿ ಭಯೋತ್ಪಾದಕರು, ಕ್ರಿಮಿನಲ್ಗಳು ಉತ್ತರಪ್ರದೇಶದಲ್ಲಿ ಬಾಲ ಬಿಚ್ಚುವ ಪ್ರಯತ್ನವನ್ನು ಮಾಡುತ್ತಿಲ್ಲ, ಹೀಗಾಗಿಯೇ ಕುಂಭಮೇಳ ಶಾಂತಿಯುತವಾಗಿ ನಡೆಯುತ್ತಿದೆ. ನಾವು ಭಯೋತ್ಪಾದಕರನ್ನು ಪೂಜಿಸುವ ಆರ್ಜೆಡಿಯವರಂತೆ ಅಲ್ಲ, ನಾವು ಭಯೋತ್ಪಾದಕರನ್ನು ಅವರ ನೈಜ ಗುರಿಯತ್ತ ಕಳುಹಿಸುವ ಕೆಚ್ಚೆದೆವುಳ್ಳವರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.