ನವದೆಹಲಿ: 2ಜಿ ಹಗರಣದಲ್ಲಿ ಆರೋಪಿಗಳಾಗಿರುವವರಿಗೆ ದೆಹಲಿ ಹೈಕೋರ್ಟ್ ವಿಭಿನ್ನ ಶಿಕ್ಷೆಯೊಂದನ್ನು ನೀಡಿದೆ. ಐದು ಆರೋಪಿಗಳಿಗೆ ತಲಾ 3 ಸಾವಿರ ಗಿಡಗಳನ್ನು ನೆಡುವಂತೆ ಅವರಿಗೆ ಆದೇಶಿಸಿದೆ.
2ಜಿ ಹಗರಣದಲ್ಲಿ ವಜಾಗೊಂಡಿರುವುದರ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೇಳಿದ ಇಬ್ಬರು ವ್ಯಕ್ತಿಗಳು ಮತ್ತು ಮೂರು ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಗಿಡನೆಡುವ ಶಿಕ್ಷೆಯನ್ನು ವಿಧಿಸಿದೆ.
ಸ್ವಾನ್ ಟೆಲಿಕಾಂನ ಶಾಹೀದ್ ಬಲ್ವಾ, ಕುಸೆಗಾಂವ್ ಹಣ್ಣು ಮತ್ತು ತರಕಾರಿ ಸಂಸ್ಥೆ ನಿರ್ದೇಶಕ ರಾಜೀವ್ ಅಗರ್ವಾಲ್, ಡೈನಾಮಿಕ್ ರಿಯಾಲಿಟಿ, ಡಿಬಿ ರಿಯಾಲಿಟಿ, ನಿಹಾರ್ ನಿರ್ಮಾಣ ಸಂಸ್ಥೆಗೆ ಗಿಡ ನೆಡುವ ಶಿಕ್ಷೆಯನ್ನು ನೀಡಲಾಗಿದೆ.
ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ನಾಯಕಿ ಕನ್ನಿಮೋಳಿ ಸೇರಿದಂತೆ ಈ ಇಬ್ಬರು ವ್ಯಕ್ತಿಗಳು ಮತ್ತು ಈ ಮೂರು ಕಂಪನಿಗಳನ್ನು ಸೇರಿದಂತೆ 17 ಮಂದಿ 2ಜಿ ಹಗರಣದ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ 2017ರಲ್ಲಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಜಾರಿ ನಿರ್ದೇಶನಾಲಯವು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ.
ಫೆ.15ರೊಳಗೆ ದೆಹಲಿ ಅರಣ್ಯಾಧಿಕಾರಿಗಳನ್ನು ಭೇಟಿಯಾಗಿ 3 ಸಾವಿರ ಗಿಡಗಳನ್ನು ನೆಡುವಂತೆ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.