ಸಿಂಧ್: ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಮತ್ತು ಮುಸ್ಲಿಂ ಯುವಕನನ್ನು ಮದುವೆಯಾಗಲು ನಿರಾಕರಿಸಿದ ಹಿಂದೂ ಯುವತಿಯೊಬ್ಬಳನ್ನು ಪಾಕಿಸ್ಥಾನದಲ್ಲಿ ಹತ್ಯೆ ಮಾಡಲಾಗಿದೆ, ರಾಜಕುಮಾರಿ ತಲ್ರೇಜಾ ಮೃತ ಯುವತಿ, ಆಘಾ ಸಲರ್ ಎಂಬ ಮುಸ್ಲಿಂ ಯುವಕ ಈಕೆಯನ್ನು ಶಿಕಾರ್ಪುರ್ ಸಿಂಧ್ನಲ್ಲಿ ಕೊಲೆ ಮಾಡಿದ್ದಾನೆ. ಈತನನ್ನು ಮದುವೆಯಾಗಲು ನಿರಾಕರಿಸಿದಕ್ಕಾಗಿ ಆಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಇದರಿಂದ ಪಾಕಿಸ್ಥಾನ ಅಲ್ಪಸಂಖ್ಯಾತರ ಪಾಲಿನ ನರಕ ಎಂಬುದು ಸ್ಪಷ್ಟವಾಗುತ್ತದೆ.
ರಾಜಕುಮಾರಿ ಶೀಘ್ರದಲ್ಲೇ ಹಿಂದೂ ಯುವಕನನ್ನು ಮದುವೆಯಾಗುವವಳಿದ್ದಳು. ಇದರಿಂದ ಕುಪಿತಗೊಂಡಿದ್ದ, ಆಕೆಯನ್ನು ಮದುವೆಯಾಗಲು ಇಚ್ಛಿಸಿದ್ದ ಆಘಾ ಸಲಾರ್ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಕೆಲದಿನಗಳಿಂದ ಆಕೆಯ ಚಲನವಲನಗಳ ಮೇಲೆ ಕಣ್ಣಿಟ್ಟು ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ.
ಪಾಕಿಸ್ಥಾನದಲ್ಲಿ, ಮುಸ್ಲಿಂ ಯುವಕನನ್ನು ಮದುವೆಯಾಗುವ ಮುನ್ನ ಇಸ್ಲಾಂಗೆ ಮತಾಂತರಗೊಳ್ಳುವುದು ಅನಿವಾರ್ಯ, ಒಮ್ಮೆ ಮತಾಂತರವಾದರೆ ಮತ್ತೆ ಸ್ವಧರ್ಮಕ್ಕೆ ಮರಳುವ ಅವಕಾಶವೇ ಇಲ್ಲ. ಅದರಲ್ಲೂ, ಅಲ್ಲಿ ಹಿಂದೂ ಯುವತಿಯರು ಮುಸ್ಲಿಮರನ್ನು ನಿರಂತರ ಮದುವೆಯಾಗುತ್ತಿದ್ದಾರೆ. ಆದರೆ ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಅಲ್ಲಿ ಮದುವೆಯಾಗಲು ಸಾಧ್ಯವೇ ಇಲ್ಲ.
ಇಡೀ ಪಾಕಿಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ಶೇ.2ರಷ್ಟು ಮಾತ್ರ ಇದೆ. ಇವರ ವಿರುದ್ಧ ಅಲ್ಲಿ ನಡೆಯುತ್ತಿರುವ ದೌರ್ಜನ್ಯ ಹೀನಾಯ ಮಟ್ಟದಲ್ಲಿದೆ. ಬಲವಂತದ ವಿವಾಹ, ಮತಾಂತರ ಅಲ್ಲಿನ ಹಿಂದೂಗಳ ಜೀವನವನ್ನೇ ನರಕವನ್ನಾಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.