ಮುಂಬಯಿ: ದೇಶದ ಕೆಲವೊಂದು ಶಾಲೆಗಳಲ್ಲಿ ಭಾರತೀಯ ಸಂಗೀತಗಳನ್ನು ಕಲಿಸುವ ಬದಲು ಇಂಗ್ಲೀಷ್ ಗಾಯನವನ್ನು ಕಲಿಸಲಾಗುತ್ತಿದೆ ಎಂದು ಖ್ಯಾತ ಗಾಯಕ ಶಂಕರ್ ಮಹಾದೇವನ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಯಾಕೆ ಶಾಲೆಗಳಲ್ಲಿ ಇಂಗ್ಲೀಷ್ ಗಾಯನವನ್ನು ಕಲಿಸಲಾಗುತ್ತದೆ? ಭಾರತೀಯ ಶಾಸ್ತ್ರೀಯ ಸಂಗೀತಗಳನ್ನು ಕಲಿಯುವಂತೆ ವಿದ್ಯಾರ್ಥಿಗಳಿಗೆ ಉತ್ತೇಜಿಸಲು ಸರ್ಕಾರ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
ಉಸಿರು ಬಿಗಿ ಹಿಡಿದು ಹಾಡುವುದರಲ್ಲಿ ನಿಸ್ಸೀಮರಾಗಿರುವ ಮಹಾದೇವನ್ ಅವರು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ತಮ್ಮ ಅಕಾಡೆಮಿಯ ಮೂಲಕ ಸಂಗೀತ ಕಲಿಸುವ ಯೋಜನೆಯಲ್ಲಿದ್ದಾರೆ.
‘ಹಲವು ಶಾಲೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಪ್ರಸ್ತುತ, ’ಇನ್ಸ್ಪೈರ್ ಇಂಡಿಯಾ’ ಯೋಜನೆಯನ್ನು ಆರಂಭಿಸಲು ಮುಂದಾಗಿದ್ದೇನೆ. ಇದರಡಿ ’ಶಂಕರ್ ಮಹಾದೇವನ್ ಅಕಾಡೆಮಿ’ ಮೂಲಕ ಬಡ ಮಕ್ಕಳಿಗೆ ಉಚಿತ ಸಂಗೀತ ಕಲಿಸಲಿದ್ದೇನೆ’ ಎಂದು ಶಿರಿಡಿಗೆ ಕುಟುಂಬ ಸಮೇತರಾಗಿ ಆಗಮಿಸಿದ್ದ ವೇಳೆ ಮಾಧ್ಯಮದವರ ಬಳಿ ಹೇಳಿದ್ದಾರೆ.
ತಮ್ಮ ಅಕಾಡೆಮಿ ವಿಶ್ವದ 76 ದೇಶಗಳಲ್ಲಿ ಭಾರತೀಯ ಸಂಗೀತವನ್ನು ಕಲಿಸುತ್ತಿದೆ ಎಂದಿದ್ದಾರೆ.
ಅಲ್ಲದೇ, ರಿಯಾಲಿಟಿ ಶೋಗಳಲ್ಲಿ ಒರ್ವ ಸಂಗೀತಗಾರ ಮಾತ್ರ ವಿಜೇತನಾಗಬಹುದು, ಆದರೆ ಉಳಿದವರ ಹೆಸರು ಜನರ ಮನಸ್ಸಲ್ಲಿ ಹಸಿರಾಗಿ ಉಳಿಯುತ್ತದೆ. ಭವಿಷ್ಯದಲ್ಲಿ ಅದು ಅವರಿಗೆ ನೆರವಾಗುತ್ತದೆ. ವಿವಿಧ ಸಮಾರಂಭಗಳಲ್ಲಿ ಹಾಡುವ ಅವಕಾಶ ಅವರಿಗೆ ಸಿಗುತ್ತದೆ. ಅದರಿಂದ ಅವರಿಗೆ ಆದಾಯವೂ ಬರುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.