ನವದೆಹಲಿ: ರಾಷ್ಟ್ರಪತಿ ಭವನದ ಮುಘಲ್ ಗಾರ್ಡನ್ ನೋಡುವ ಅವಕಾಶ ನಾಳೆಯಿಂದ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಈ ಬಾರಿಯ ಉದ್ಯಾನೋತ್ಸವದಲ್ಲಿ ಜಪಾನ್ ಮತ್ತು ನೆದರ್ಲ್ಯಾಂಡ್ನ ಪುಷ್ಪಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 10 ಸಾವಿರ ತುಲಿಪ್ಸ್, 137 ಪ್ರಬೇಧದ ಗುಲಾಬಿಗಳು, 70 ವಿಧದ ಋತುಮಾನ ಹೂವುಗಳು 15 ಎಕರೆ ಪ್ರದೇಶದ ಗಾರ್ಡನ್ನಲ್ಲಿ ಕಂಗೊಳಿಸಲಿವೆ. ಬಿಳಿ, ಹಳದಿ, ಕೆಂಪು ಮತ್ತು ಕಿತ್ತಾಳೆ ಬಣ್ಣಗಳು ರಾಷ್ಟ್ರಪತಿ ಭವನದ ಸೌಂದರ್ಯವನ್ನು ವೃದ್ಧಿಸಲಿವೆ. ಪಸದೆನ, ಪನ್ಸಿ, ಚಿನಾ ಮ್ಯಾನ್, ಮಾರಿಗೋಲ್ಡ್, ಆಂಟಿಗನ್, ಪಿಂಕ್ ಪರಫೇಟ್, ಡೇಲಿಯಾ, ಝಂಬ್ರಾ ಮುಂತಾದ ಹೂವುಗಳು ಉದ್ಯಾನೋತ್ಸವದಲ್ಲಿ ರಾರಾಜಿಸಲಿವೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಉದ್ಯಾನೋತ್ಸವವನ್ನು ಉದ್ಘಾಟನೆಗೊಳಿಸಲಿದ್ದು, ಜನಸಾಮಾನ್ಯರು ತೆರಳಿ ಗಾರ್ಡನ್ನ ಸೌಂದರ್ಯವನ್ನು ಸವಿಯಬಹುದಾಗಿದೆ. ರಾಷ್ಟ್ರಪತಿ ಭವನ ಪ್ರತಿವರ್ಷ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದೆ.
ಹೂವಿನ ಉದ್ಯಾನವನದೊಂದಿಗೆ, ಜನರು ಎಲ್ಲಾ ಧರ್ಮಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡ ಗಿಡ ಮರಗಳಿರುವ ಆಧ್ಯಾತ್ಮಿಕ ಗಾರ್ಡನ್, ಹರ್ಬಲ್ ಗಾರ್ಡನ್ಗೂ ತೆರಳಬಹುದಾಗಿದೆ. ಇಲ್ಲಿ ಬ್ರಾಹ್ಮಿ, ಅಶ್ವಥ, ಅಶ್ವಗಂಧ, ಬೋನ್ಸಾಯಿ ಗಿಡಗಳು ಇವೆ. ಮ್ಯೂಸಿಕಲ್ ಗಾರ್ಡನ್ ಕೂಡ ಇದೆ. ವಾಯು ಶುದ್ಧೀಕರಿಸುವ ಗಿಡಗಳು, ಸಾವಯವ ತರಕಾರಿ ಗಿಡಗಳು, ಹಣ್ಣಿನ ಮರಗಳು ಕೂಡ ಇಲ್ಲಿವೆ.
ಈ ವರ್ಷದಿಂದ ಉದ್ಯಾನೋತ್ಸವಕ್ಕೆ ಆನ್ಲೈನ್ ಬುಕ್ಕಿಂಗ್ ಕೂಡ ಆರಂಭಿಸಲಾಗಿದೆ. 7 ದಿನಕ್ಕಿಂತ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ 3 ಗಂಟೆಯವರೆಗೆ ಪ್ರವೇಶ ಕಲ್ಪಿಸಲಾಗಿದೆ. ವೀಕೆಂಡ್ಗಳಲ್ಲಿ ದಿನಕ್ಕೆ ಮೂರು ಬಾರಿ 9 ಗಂಟೆಗೆ, 10 ಗಂಟೆಗೆ, 11 ಗಂಟೆಗೆ ಜನರನ್ನು ಒಳಬಿಡಲಾಗುತ್ತದೆ.
ಒಂದು ತಿಂಗಳುಗಳ ಕಾಲ ಉದ್ಯಾನೋತ್ಸವ ನಡೆಯಲಿದೆ. ಮಾರ್ಚ್ 10ರವರೆಗೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.