ಪಣಜಿ: ಗೋವಾದ 12 ವರ್ಷದ ಬಾಲಕಿಯೊಬ್ಬಳು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಬಹಿರಂಗ ಪತ್ರವನ್ನು ಬರೆದು, ಅವರ ಒಳಮುಖವನ್ನು ಬಯಲು ಮಾಡಿದ್ದಾಳೆ. ಬಾಲಕಿ ಬರೆದ ಪತ್ರ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ, ಹಲವು ಸುದ್ದಿ ಮಾಧ್ಯಮಗಳು ಕೂಡ ಇದನ್ನು ಪ್ರಕಟಿಸಿವೆ. ಆದರೆ ಎಲ್ಲದಕ್ಕೂ ಮೂಗು ತೂರಿಸುವ ತರೂರ್ ಮಾತ್ರ ಈ ಬಗ್ಗೆ ಇದುವರೆಗೆ ಚಕಾರವೆತ್ತಿಲ್ಲ. ಬಾಲಕಿಯ ಪತ್ರದ ಬಗ್ಗೆ ಗಾಢ ಮೌನ ವಹಿಸಿದ್ದಾರೆ.
ತರೂರ್ ಅವರು ಇತ್ತೀಚಿಗೆ ಹಿಂದಿ, ಹಿಂದೂ ಮತ್ತು ಹಿಂದುತ್ವದ ಬಗ್ಗೆ ಬೇಜವಾಬ್ದಾರಿಯುತವಾದ, ದೇಶವನ್ನು ಒಡೆಯುವಂತಹ ಹೇಳಿಕೆಯನ್ನು ನೀಡಿದ್ದರು. ಇದಕ್ಕಾಗಿ ಜನರಿಂದ ಭಾರೀ ವಿರೋಧಗಳು ಕೇಳಿ ಬಂದವು, ಅವರ ಹೇಳಿಕೆಯಿಂದ ದೇಶದ ಶೇ.80ರಷ್ಟು ಜನಸಂಖ್ಯೆಗೆ ಅವಮಾನವಾಗಿದೆ ಎಂದು ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪರವಾದ ಮಾಧ್ಯಮಗಳು ಈ ವಿವಾದವನ್ನು ತಣ್ಣಗಾಗಿಸಲು ಹಲವು ಪ್ರಯತ್ನಗಳನ್ನು ಮಾಡಿತು. ಆದರೆ ಜನರ ಆಕ್ರೋಶ ತಣ್ಣಗಾಗಿಲ್ಲ.
ತರೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರಲ್ಲಿ ಗೋವಾದ 12 ವರ್ಷದ ಬಾಲಕಿ ಕಿಯನ್ನ ರೋಡ್ರಿಗಸ್ ಕೂಡ ಒಬ್ಬಳು. ತರೂರ್ ಹೇಳಿಕೆಯನ್ನು ಪ್ರಶ್ನಿಸಿ ಆಕೆ ಬರೆದ ಪತ್ರ ಭಾರೀ ವೈರಲ್ ಆಗಿದೆ. ಆಕೆಯ ಪ್ರಶ್ನೆಗೆ ತರೂರ್ ಉತ್ತರವಿಲ್ಲದಂತಾಗಿದ್ದಾರೆ.
ತರೂರ್ ಅವರ ಹೇಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಆಕೆ, ಅವರು ಕೋಟ್ಯಾಂತರ ಹಿಂದೂಗಳ ಭಾವನೆಗೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ, ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ”ಒಂದು ವೇಳೆ ಹಿಂದೂಗಳು ಈ ದೇಶವನ್ನು ಒಡೆಯುತ್ತಿದ್ದಾರೆ ಎಂದಾದರೆ ನೀವು ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಹಿಂದೂಗಳನ್ನು ಉಚ್ಛಾಟಿಸುವಿರಾ? ಹಾಗೆ ಮಾಡಲು ಸಾಧ್ಯವಿಲ್ಲ ಎಂದಾರೆ, ಹಿಂದೂಗಳು ದೇಶ ಒಡೆಯುತ್ತಾರೆ ಎಂಬುದನ್ನು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಹಾಗೆ ಹೇಳುವ ಮೂಲಕ ನೀವು ಕಾಂಗ್ರೆಸ್ ಪಕ್ಷದ ಹಿಂದೂ ಮಹಿಳೆ, ಪುರುಷರಿಗೆ ಅವಮಾನ ಮಾಡಿದ್ದೀರಿ’ ಎಂದು ಆಕೆ ಹೇಳಿದ್ದಾಳೆ.
“ಹಿಂದೂಗಳು ದೇಶ ಒಡೆಯುತ್ತಾರೆಂದು ನನಗನಿಸುವುದಿಲ್ಲ.
ನನಗನಿಸುತ್ತದೆ, ನೀವು ಮತ್ತು ನಿಮ್ಮಂತಹ ಇತರರರು ಮಾತನಾಡುವ ಒಡೆಯುವಿಕೆ ನಿಮ್ಮ ಗೇಮ್ ಪ್ಲ್ಯಾನ್ನ ಭಾಗ ಎಂದು. ದೇಶದಲ್ಲಿ ಭಯ ಹುಟ್ಟಿಸುವ ಉದ್ದೇಶ ನಿಮ್ಮದಾಗಿದೆ.
ಕೆಲವೊಂದು ದೇಶಗಳು ಭಾರತ ನಿಂತಲ್ಲೇ ಇರಲಿ, ತನ್ನ ಗುರಿಯನ್ನು ತಲುಪದಿರಲಿ ಎಂದು ಬಯಸುತ್ತಿವೆ. ನಮ್ಮ ಯುಎನ್ ಅಣಕು ಚರ್ಚೆಯಲ್ಲೂ ಇದನ್ನು ನಾನು ಗಮನಿಸಿದ್ದೇನೆ.
ಈ ವಯಸ್ಸಲ್ಲಿ ನಾನು ನನ್ನ ಸ್ನೇಹಿತರನ್ನು ಜಾತಿ ಅಥವಾ ಜನಾಂಗದ ಮೂಲಕ ಗುರುತಿಸುವುದಿಲ್ಲ. ನಾನು ಅವರನ್ನು ಮನುಷ್ಯರಾಗಿ ನೋಡುತ್ತೇನೆ, ಅವರನ್ನು ಸಹಪಾಠಿಗಳಂತೆ, ಭಾರತೀಯರಂತೆ ನೋಡುತ್ತೇನೆ.
ನಿಮ್ಮ ಹಿಂದುತ್ವದ ವಿಶ್ಲೇಷಣೆ ಏನೆಂದು ನನಗೆ ತಿಳಿದಿಲ್ಲ. ಆದರೆ ನಾನು, ಹಿಂದುತ್ವವೆಂದರೆ ಧರ್ಮಾತೀತವಾಗು, ಹಿಂದೂ ಮೂಲದ ಬಗ್ಗೆ ಹೆಮ್ಮೆ ಮತ್ತು ಹಿಂದೂ ಸಂಸ್ಕೃತಿಯ ಬಗೆಗಿನ ಹೆಮ್ಮೆ ಎಂದು ಭಾವಿಸಿದ್ದೇನೆ. ನನ್ನ ಹಿಂದೂ ಸಂಸ್ಕೃತಿ ನನ್ನನ್ನು ಆಕರ್ಷಿಸುತ್ತದೆ.
ನೀವು ನಿಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡರೆ ಒಳ್ಳೆಯದು ಎನ್ನುವುದು ನನ್ನ ಭಾವನೆ. ಜನರ ಶಕ್ತಿ ಒಗ್ಗೂಡಬೇಕು, ಒಡೆದು ಹೋಗಬಾರದು”
ಕಿಯನ್ನಾ ರೋಡ್ರಿಗಸ್, 7ನೇ ತರಗತಿ ವಿದ್ಯಾ ವಿಕಾಸ್ ಅಕಾಡಮಿ
ಆಕೆಯ ಮಾತಿಗೆ, ಪ್ರಶ್ನೆಗೆ ತರೂರ್ ಬಳಿ ಉತ್ತರವೇ ಇಲ್ಲದಂತಾಗಿದೆ.
source: goachronicle.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.