ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಿಂದ ಗಂಗಾ ನದಿಗೆ ಕೊಳಚೆ ನೀರು ಸೇರಲ್ಲ. ಈ ವರ್ಷದ ಜುಲೈ ವೇಳೆಗೆ, ವಾರಣಾಸಿಯ ಕೊಳಚೆ ನಿರ್ವಹಣೆಯ ಸಾಮರ್ಥ್ಯ ದಿನಕ್ಕೆ 400 ಮಿಲಿಯನ್ ಲೀಟರ್ಗೆ ಏರಿಕೆಯಾಗಲಿದೆ. 2020ರ ವೇಳೆಗೆ ಗಂಗಾನದಿಯನ್ನು ಶುದ್ಧೀಕರಣಗೊಳಿಸುವಲ್ಲಿ ಈ ಕ್ರಮ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
2014ರ ಜೂನ್ನಲ್ಲಿ ಮೋದಿ ಸರ್ಕಾರ, ನಮಾಮಿ ಗಂಗಾ ಯೋಜನೆಯನ್ನು ಆರಂಭಿಸಿತು. ಗಂಗಾ ನದಿ ಪನರುಜ್ಜೀವನ, ಸಂರಕ್ಷಣೆ ಮತ್ತು ಶುದ್ಧೀಕರಣಕ್ಕೆ ಬಜೆಟ್ನಲ್ಲಿ ರೂ.20 ಸಾವಿರ ಕೋಟಿಗಳನ್ನು ಮೀಸಲಿರಿಸಿತು. ಶುದ್ಧ ಗಂಗಾಕ್ಕಾಗಿ ರಾಷ್ಟ್ರೀಯ ಸಮಿತಿ, ನ್ಯಾಷನಲ್ ಗಂಗಾ ಕೌನ್ಸಿಲ್ನ ಘಟಕಗಳ ಸ್ಥಾಪನೆಯನ್ನು 2016ರ ಅಕ್ಟೋಬರ್ನಲ್ಲಿ ಮಾಡಲಾಯಿತು.
ಉತ್ತರಪ್ರದೇಶದ ಖಾನ್ಪುರ, ಪ್ರಯಾಗ್ರಾಜ್, ಬಿತೂರ್, ಮಥುರಾ-ವೃಂದಾವನಗಳಲ್ಲಿ ಇರುವ 94 ಘಾಟ್ಗಳ ಶುದ್ಧೀಕರಣಕ್ಕೆ ರೂ.13 ಕೋಟಿಗಳನ್ನು ಮೀಸಲಿಡಲಾಯಿತು. ವರ್ಷಕ್ಕೆ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ವಾರಣಾಸಿಯ 84 ಘಾಟ್ಗಳನ್ನು ಶುದ್ಧ ಮಾಡಲು ಖಾಸಗಿಯವರನ್ನು ನಿಯೋಜಿಸಲಾಯಿತು. ಗಂಗಾ ಶುದ್ಧೀಕರಣ ಯೋಜನೆಯಡಿ, ರಮ್ಮನದಲ್ಲಿ 50 ಎಂಎಲ್ಡಿ ಸಾಮರ್ಥ್ಯವುಳ್ಳ ಕೊಳಚೆ ನಿರ್ವಹಣಾ ಘಟಕವನ್ನು ಸ್ಥಾಪನೆ ಮಾಡಿ ಅಸ್ಸಿ ನದಿಯಿಂದ ಗಂಗೆಗೆ ಸೇರುತ್ತಿದ್ದ ಕೊಳಚೆ ನೀರನ್ನು ನಿಲ್ಲಿಸಲಾಯಿತು. ಪ್ರಸ್ತುತ ವಾರಣಾಸಿಯ ಕೊಳಚೆ ನಿರ್ವಹಣಾ ಸಾಮರ್ಥ್ಯ 300 ಎಂಎಲ್ಡಿ ಆಗಿದ್ದು, ಅದು 2035ರ ವೇಳೆಗೆ 400 ಎಂಎಲ್ಡಿಗೆ ಏರಿಕೆಯಾಗಲಿದೆ.
ಕೊಳಚೆ ನಿರ್ವಹಣಾ ಘಟಕಗಳ ಸಮರ್ಪಕ ಕಾರ್ಯದಿಂದಾಗಿ ಇಂದು ವಾರಣಾಸಿಯ ತುಸು ಕೊಳಚೆ ನೀರೂ ಗಂಗೆಯನ್ನು ಸೇರುತ್ತಿಲ್ಲ. ಹೀಗಾಗಿ ಮೋದಿಯವರ ಲೋಕಸಭಾ ಕ್ಷೇತ್ರ ಗಂಗೆಗೆ ಕೊಳಚೆ ನೀರನ್ನು ವಿಸರ್ಜಿಸದ ಪ್ರಥಮ ನಗರವಾಗಿ ಹೊರಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.