ಮಹಾರಾಷ್ಟ್ರ : ಕಾಡು ಪ್ರದೇಶದಲ್ಲಿ, ವನ್ಯಜೀವಿಗಳ ಭಯದೊಂದಿಗೆ ಆಕೆ ನಿತ್ಯ 2 ಗಂಟೆ ನಡೆಯಬೇಕಾಗುತ್ತಿತ್ತು. ಶಿಕ್ಷಣ ಪಡೆಯುವುದಕ್ಕಾಗಿ ಇದು ಆಕೆಗೆ ಅನಿವಾರ್ಯವಾಗಿತ್ತು. ನಿಖಿತಾ ಕೃಷ್ಣ ಮೋರ್ಗೆ ಶಿಕ್ಷಣ ಜೀವನದ ಏಕೈಕ ಗುರಿ. ಆ ಗುರಿ ಸಾಧನೆಗೆ ಆಕೆ ಕಠಿಣ ಹಾದಿಯನ್ನು ತುಳಿಯಲೇ ಬೇಕು.
ಮಹಾರಾಷ್ಟ್ರದ ರಾಯ್ಘಡ್ನ ಪಲ್ಚಿಲ್ ಗ್ರಾಮದ ಸ್ವ ಶಾಂತರಾಮ್ ಶಂಕರ್ ಜಾಧವ್ ನ್ಯೂ ಇಂಗ್ಲೀಷ್ ಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ನಿಖಿತಾಗಿ ಶಿಕ್ಷಣ ಪಡೆದು ವೈದ್ಯೆಯಾಗಬೇಕೆಂಬ ಕನಸಿದೆ.
ಆದರೆ, ಶಾಲೆ ಮತ್ತು ಆಕೆಯ ಮನೆಗಿರುವ ಅಂತರವೇ ಆಕೆಗೆ ದೊಡ್ಡ ಸವಾಲು, ನಿತ್ಯ 14 ಕಿಲೋಮೀಟರ್ ನಡೆಯಬೇಕಾಗಿತ್ತು. ಸವಾಲಿನ ನಡುವೆಯೂ ಆಕೆಯ ಪೋಷಕರು ಆಕೆಗೆ ಶಿಕ್ಷಣ ನೀಡಲು ಕಟಿಬದ್ಧರಾಗಿದ್ದರು, ಭತ್ತದ ಕೃಷಿಕರಾದ ಅವರಿಗೆ ಮಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾಡು ಮೃಗಗಳನ್ನು ಹೊಂದಿದ ಅಡವಿಯ ನಡುವೆ ಕಾಲ್ನಡಿಗೆ ಆಕೆಗೆ ಅನಿವಾರ್ಯವಾಗಿತ್ತು. ಮನೆಯಿಂದ ಬೆಳಿಗ್ಗೆ 8.45ಕ್ಕೆ ಹೊರಟರೆ, ರಾತ್ರಿ 10.45ಕ್ಕೆ ಆಕೆ ಮನೆಗೆ ತಲುಪಬೇಕಾಗಿತ್ತು. ಶನಿವಾರ ಶಾಲೆ 8 ಗಂಟೆಗೆ ಆರಂಭವಾಗುವುದರಿಂದ, ಆಕೆ ಬೆಳಿಗ್ಗೆ 6 ಗಂಟೆಗೆ ನಡಿಗೆ ಆರಂಭಿಸಬೇಕಿತ್ತು.
ಆದರೆ ಈಗ ಆಕೆಯ ಕಷ್ಟ ಅಂತ್ಯವಾಗುತ್ತಿದೆ.
ದಿನಪತ್ರಿಕೆಯೊಂದು ಆಕೆಯ ನಿತ್ಯದ ಗೋಳನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿತ್ತು. ಇದನ್ನು ಪುಣೆ ಮೂಲದ ಕಂಪನಿ ಸಿಟಿ ಕಾಪೋರೇಶನ್ ಎಂಡಿ ಅನಿರುದ್ಧ ದೇಶಪಾಂಡೆಯವರು ನೋಡಿ, ಆಕೆಗೆ ಎಲೆಕ್ಟ್ರಿಕ್ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ.
ಶಿಕ್ಷಣ ಪಡೆಯುವ ಗುರಿಯೊಂದಿಗೆ ನಿತ್ಯ ಎರಡು ಗಂಟೆ ನಡೆಯುವ ಆಕೆಯ ಕಥೆ ಕೇಳಿ ಪ್ರೇರಿತನಾದೆ. ಎಲೆಕ್ಟ್ರಿಕ್ ಸೈಕಲ್ ಆಕೆಗೆ ಸಹಕಾರಿಯಾಗಲಿದೆ ಎಂದು ಅರಿತು ಅದನ್ನು ಆಕೆಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ದೇಶಪಾಂಡೆ ಹೇಳಿದ್ದಾರೆ.
ನೈಬ್ ಮೋಟಾರ್ಸ್ ಈ ಸೈಕಲ್ ತಯಾರಿಸಿದ್ದು, ಎರಡು ಗಂಟೆ ಚಾರ್ಜ್ ಮಾಡಿದರೆ 100 ಕಿಮೀ ಸಂಚರಿಸುತ್ತದೆ. ಗಂಟೆಗೆ ಇದು 25 ಕಿಮೀ ಓಡುತ್ತದೆ. ಚಾರ್ಜ್ ಇಲ್ಲದ ಸಂದರ್ಭದಲ್ಲಿ, ಸಾಮಾನ್ಯ ಸೈಕಲ್ ರೀತಿ ತುಳಿಯುತ್ತಾ ಇದನ್ನು ಓಡಿಸಬಹುದು. ಈ ಸೈಕಲ್ ನಿಖಿತಾ ಓದಿಗೆ ಸಾಕಷ್ಟು ಸಹಾಯಮಾಡಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.