ಅಲಹಾಬಾದ್: ಬಿಳಿ ಬಟ್ಟೆ ಧರಿಸಿ, ಬೋಳಿಸಿದ ತಲೆ ಮೇಲೆ ಸ್ವಸ್ಥಿಕದ ಚಿಹ್ನೆಯನ್ನು ಮೂಡಿಸಿ ಕೂತಿದ್ದ ಕೆನಡಾದ ಮಹಿಳೆ ವರೋನಿಖ್, ಕುಂಭಮೇಳದಲ್ಲಿ ಎಲ್ಲಾ ಕಡೆ ಕಾಣುವ ಖಾವಿಧಾರಿ ಸಾಧುಗಳ ನಡುವೆ ಎದ್ದು ಕಾಣುತ್ತಿದ್ದರು. ಆದರೆ, ಅವರ ಗುರು ಮಾತೆ ‘ಗುರು ಮಂತ್ರ’ವನ್ನು ಅವರ ಕಿವಿಯಲ್ಲಿ ಪಿಸುಗುಟ್ಟಿದಾಗ ಅವರ ಮುಖದಲ್ಲಿ ಮೂಡಿ ಬಂದ ಆ ಶಾಂತಚಿತ್ತತೆ, ಕುಂಭಮೇಳಕ್ಕೆ ಮೋಕ್ಷ ಹುಡುಕಿಕೊಂಡು ಬರುವ ನೂರಾರು ಯಾತ್ರಾರ್ಥಿಗಳಲ್ಲಿ ಅವರನ್ನೂ ಒಬ್ಬರನ್ನಾಗಿಸಿತು.
ವರೋನಿಕ, ಕುಂಭಮೇಳಕ್ಕೆ ದೀಕ್ಷೆ ಪಡೆದು, ಬ್ರಹ್ಮಚಾರಿಗಳಾಗಲು ಬಂದ 82 ಮಂದಿ ವಿದೇಶಿಗರಲ್ಲಿ ಒಬ್ಬರಾಗಿದ್ದಾರೆ. ಶನಿವಾರ ಕುಂಭಮೇಳ ಮೈದಾನದ 14ನೇ ವಲಯದ ಶಕ್ತಿಧಾಮ ಶಿಬಿರದಲ್ಲಿ ಇವರಿಗೆ ಬ್ರಹ್ಮಚಾರ್ಯೆ ದೀಕ್ಷೆಯನ್ನು ಪ್ರದಾನಿಸಲಾಯಿತು. ಈ ವಿದೇಶಿಗರ ತಂಡದಲ್ಲಿ 79 ಮಂದಿ ಜಪಾನಿಗರು, ಯುಎಸ್, ಐರ್ಲೆಂಡ್, ಕೆನಡಾದ ತಲಾ ಒಬ್ಬರು ಇದ್ದರು.
ಶಕ್ತಿಧಾಮ ಜಗದ್ಗುರು ಸಾಯಿ ಮಾ ಅವರು ಇವರಿಗೆ, ‘ಅಜೀವನ ಬ್ರಹ್ಮಚರ್ಯೆ ವ್ರತ’ವನ್ನು ದಯಪಾಲಿಸಿದರು.
ಈ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ, ವೃತ್ತಿಯಲ್ಲಿ ಯೋಗ ಶಿಕ್ಷಕಿಯಾದ ವರೋನಿಕ ಅವರು, ‘ನಾಲ್ಕು ವರ್ಷಗಳ ಹಿಂದೆ ಕೆನಡಾದಲ್ಲಿ ಸಾಯಿ ಮಾ ಅವರ ಭೇಟಿಯಾದೆ. ಅವರನ್ನು ಭೇಟಿಯಾದ ಬಳಿಕ, ನನ್ನ ಶಕ್ತಿಯನ್ನು ಸನಾತನ ಧರ್ಮದ ಜ್ಞಾನ ಪಡೆಯಲು ಬಳಸಬೇಕು ಎಂದು ನಿರ್ಧರಿಸಿದೆ. ಸನಾದನ ಧರ್ಮದ ತತ್ವಗಳು ನನ್ನನ್ನು ಆಳವಾಗಿ ಪ್ರೇರೇಪಿಸಿದವು, ಹೀಗಾಗಿ ಬ್ರಹ್ಮಚರ್ಯೆ ತೆದುಕೊಂಡೆ’ ಎಂದಿದ್ದಾರೆ.
ಜೀವನದ ಸರಪಳಿಯಿಂದ ಮೋಕ್ಷವನ್ನು ಪಡೆಯಲು ಜ್ಞಾನ ಮತ್ತು ಧ್ಯಾನ ಪ್ರಮುಖ ಅಂಶಗಳಾಗಿವೆ. ಒಮ್ಮೆ ಮನುಷ್ಯ ಬ್ರಹ್ಮಚರ್ಯೆ ಪಾಲಿಸಿದರೆ, ಜಗತ್ತಿನ ಲೈಂಗಿಕ, ತಿಳುವಳಿಕೆಯ ಒತ್ತಡದಿಂದ ದೂರವಾಗಬಹುದು, ಬ್ರಹ್ಮಜ್ಞಾನವನ್ನು ಪಡೆಯಬಹುದು ಎಂದಿದ್ದಾರೆ.
ಮೊದಲು ಅವರ ತಲೆಯನ್ನು ಬೋಳಿಸಿ ಅದರ ಮೇಲೆ ಸ್ವಸ್ಥಿಕವನ್ನು ಬರೆಯಲಾಯಿತು, ಬಳಿಕ ಸಾಯಿ ಮಾ ಅವರು ಅವರ ಕಿವಿಯಲ್ಲಿ ಗುರುಮಂತ್ರವನ್ನು ಮಠಿಸಿದರು. ಈ ಮೂಲಕ ಅವರಿಗೆ ದೀಕ್ಷೆಯನ್ನು ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.