ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ವಿದೇಶಿ ಅನುದಾನಿತ ಎನ್ಜಿಓಗಳ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿದೆ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಎನ್ಜಿಓಗಳು ಪಾಲಿಸಬೇಕಾದ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿದ್ದ ಹಲವಾರು ಎನ್ಜಿಓಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. 2014ರ ಬಳಿಕ ಮೋದಿ ಸರ್ಕಾರ, 15 ಸಾವಿರ ವಿದೇಶಿ ಅನುದಾನಿತ ಎನ್ಜಿಓಗಳ ಲೈಸೆನ್ಸ್ನ್ನು ರದ್ದುಗೊಳಿಸಿದೆ.
ಅಂತಹ ಒಂದು ಎನ್ಜಿಓ ಗ್ರೀನ್ಪೀಸ್. ಭಾರತದ ವಿದ್ಯುತ್ ಘಟಕಗಳ ವಿರುದ್ಧ ಭಾರೀ ಮಟ್ಟದ ಹೋರಾಟಗಳನ್ನು ಆಯೋಜಿಸುತ್ತಿದ್ದ ಈ ಎನ್ಜಿಓ 2015ರಿಂದ ವಿದೇಶಿ ದೇಣಿಗೆ ಪಡೆಯುವುದು ನಿಂತು ಹೋಗಿದೆ, ಇದರ ಬ್ಯಾಂಕ್ ಖಾತೆಯನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ 60 ಮಂದಿ ಭಾರತೀಯ ಅಧಿಕಾರಿಗಳ ಪೈಕಿ 40 ಮಂದಿಯನ್ನು ವಜಾಗೊಳಿಸಲಾಗಿದೆ. ನವದೆಹಲಿ ಮತ್ತು ಪಾಟ್ನಾದಲ್ಲಿನ ಇದರ ಎರಡು ಪ್ರಾದೇಶಿಕ ಕಛೇರಿಗಳಿಗೆ ಬೀಗ ಜಡಿಯಲಾಗಿದೆ.
ಗುಪ್ತಚರ ಇಲಾಖೆಯ ವರದಿಗಳ ಪ್ರಕಾರ, ಭಾರತದ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕ ಇತ್ಯಾದಿಗಳ ವಿರುದ್ಧ ಪ್ರತಿಭಟನೆ, ಹೋರಾಟ ನಡೆಸುವ ಈ ಪರಿಸರ ಗುಂಪಿನ ಚಟುವಟಿಕೆಗಳು ಭಾರತದ ಆರ್ಥಿಕ ಭದ್ರತೆಗೆ ಮಾರಕವಾಗಿದೆ. ಭಾರತದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಮ್ಸ್ಟರ್ಡ್ಡಾಮ್ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಈ ಎನ್ಜಿಓ, 2004-05ರಿಂದ ದೆಹಲಿಯಲ್ಲಿ ಕಾರ್ಯಾಚರಿಸುತ್ತಿದೆ. ಇದರ ವಿದೇಶಿ ದೇಣಿಗೆಗಳು ಹಲವಾರು ವಿವಾದಗಳನ್ನು ಸೃಷ್ಟಿಸಿದ್ದವು. ತನ್ನ ವಿದೇಶಿ ಅನುದಾನದ ಬಗ್ಗೆ ವಿವರಣೆ ನೀಡುವಲ್ಲಿಯೂ ಇದು ವಿಫಲವಾಗಿತ್ತು. ತಕ್ಷಣವೇ ಸರ್ಕಾರ ಇದರ ಎಫ್ಸಿಆರ್ಎ ಲೈಸೆನ್ಸ್ ಕ್ಯಾನ್ಸಲ್ ಮಾಡಿತ್ತು, ವಿದೇಶಿ ಹಣವನ್ನು ಮೊಟಕುಗೊಳಿಸಿತ್ತು, ಇದರಿಂದಾಗಿ ಎನ್ಜಿಓ ದೇಶೀಯ ಅನುದಾನಕ್ಕೆ ಒಗ್ಗಿಕೊಳ್ಳಬೇಕಾಯಿತು. ಬಳಿಕ ಮೋದಿ ಸರ್ಕಾರ ಇದರ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಂಡಿತು. 2018ರ ಅಕ್ಟೋಬರ್ನಲ್ಲಿ, ಜಾರಿ ನಿರ್ದೇಶನಾಲಯ ಇದರ ಬೆಂಗಳೂರು ಕಛೇರಿ ಮೇಲೆ ದಾಳಿಯನ್ನೂ ನಡೆಸಿ ವಿಚಾರಣೆ ನಡೆಸಿತ್ತು. ಕಾನೂನು ಬಾಹಿರ ಚಟುವಟಿಕೆಗಳ ವಿಚಾರಣೆ ನ್ಯಾಯಾಲಯದಲ್ಲಿ ಈಗಲೂ ಮುಂದುವರೆದಿದೆ.
ಕೇಂದ್ರ ಸರ್ಕಾರದ ಕಠಿಣ ನಿಲುವಿನಿಂದ ಅನುದಾನ ಕೊರತೆ ಎದುರಿಸಿದ ಗ್ರೀನ್ ಪೀಸ್, ಪಾಟ್ನಾ, ವೈಧಾನ, ಪುಣೆ, ಮುಂಬಯಿ, ಹೈದರಾಬಾದ್ನಲ್ಲಿನ ಕಛೇರಿಗಳನ್ನು ಮುಚ್ಚಿದೆ. 300 ಉದ್ಯೋಗಿಗಳನ್ನು ಹೊಂದಿದ್ದ ಈ ಸಂಸ್ಥೆ ಈಗ 20 ಮಂದಿ ಉದ್ಯೋಗಿಗಳನ್ನು ಹೊಂದಿದೆ.
source: rightlog.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.