ನವದೆಹಲಿ: ಭಾರತಾದ್ಯಂತ ಕಾರ್ಯಾಚರಿಸುತ್ತಿದ್ದ ಉಗ್ರ ಸಂಘಟನೆಗಳ ಹೆಡೆಮುರಿ ಕಟ್ಟುವಲ್ಲಿ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಯಶಸ್ವಿಯಾಗಿದೆ. ಉಗ್ರರ ವಿರುದ್ಧ ಶೂನ್ಯ ಸಹನೆ ಇಟ್ಟುಕೊಂಡಿರುವ ಸರ್ಕಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಮರೆಯಲಾರದ ತಿರುಗೇಟನ್ನು ನೀಡಿದೆ.
ದೇಶದೊಳಗಿನ ಉಗ್ರ ಸಂಘಟನೆಗಳ ವಿರುದ್ಧ ಮೋದಿ ಸರ್ಕಾರ ಕಠಿಣ ಧೋರಣೆಯನ್ನು ಮುಂದುವರೆಸಿದ್ದು, ಸಿಮಿ ವಿರುದ್ಧದ ನಿಷೇಧವನ್ನು ಮತ್ತೆ ಐದು ವರ್ಷಗಳ ಕಾಲ ಮುಂದುವರೆಸಿದೆ. ಕೇಂದ್ರ ಗೃಹ ಸಚಿವಾಲಯ, ಸ್ಟುಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷಗಳ ಕಾಲ ಮುಂದುವರೆಸಿದ್ದು ಈ ಬಗ್ಗೆ ಜ.31ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, 1997ರ ಕಾನೂನು ಬಾಹಿರ ಚಟುವಟಿಕೆಯ ಕಾಯ್ದೆಯಡಿ ನಿಷೇಧವನ್ನು ಮುಂದುವರೆಸಲಾಗಿದೆ.
ಸಿಮಿ ಸಂಘಟನೆಯ ಚಟುವಟಿಕೆಗಳನ್ನು ತಕ್ಷಣ ತಡೆದು, ಅದನ್ನು ನಿರ್ಮೂಲನೆ ಮಾಡಿದ್ದರೇ, ಅದು ಮತ್ತೆ ತನ್ನ ಮೂಲವನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಂದಾಗುತ್ತದೆ. ಅದರ ಸದಸ್ಯರಲ್ಲಿ ಕೆಲವರು ಇನ್ನೂ ತಲೆಮರೆಸಿಕೊಂಡಿದ್ದಾರೆ, ಅವರು ಯುವಕರ ತಲೆ ಕಡೆಸಿ ಭಾರತ ವಿರೋಧಿ ಅಜೆಂಡಾವನ್ನು ಅವರ ತಲೆಯಲ್ಲಿ ತುಂಬಿ ಮತ್ತೆ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.
1977ರಲ್ಲಿ ಅಲಿಘಢದಲ್ಲಿ ಸ್ಥಾಪನೆಯಾದ ಸಿಮಿ, ಬಳಿಕ ವಿವಿಧ ರಾಜ್ಯಗಳಿಗೆ ತನ್ನ ಕಪಿಮುಷ್ಠಿಯನ್ನು ಚಾಚಿ, ವಿವಿಧ ವಿಧ್ವಂಸಕ ಕೃತ್ಯ ಎಸಗಿತ್ತು. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವುದು ಇದರ ಮೂಲ ಉದ್ದೇಶವಾಗಿತ್ತು. 2014ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ದಾಳಿ, 2017ರಲ್ಲಿ ಗಯಾ ದಾಳಿ, 2014ರಲ್ಲಿ ಭೋಪಾಲ್ ದಾಳಿ ಸೇರಿದಂತೆ 58 ಪ್ರಕರಣಗಳು ಸಿಮಿ ವಿರುದ್ಧ ಇದೆ. 2014 ಫೆ.1ರಂದು ಯುಪಿಎ ಸರ್ಕಾರ ಇದರ ಮೇಲೆ ನಿಷೇಧವನ್ನು ಹೇರಿತ್ತು. ಮೋದಿ ಸರ್ಕಾರ ಈ ನಿಷೇಧವನ್ನು 2024ರವರೆಗೂ ವಿಷ್ತರಣೆ ಮಾಡಿದೆ.
ಭಯೋತ್ಪಾದಕರ ವಿರುದ್ಧ ಮೋದಿ ಸರ್ಕಾರ ತೆಗೆದುಕೊಂಡ ಕಠಿಣ ನಿಲುವು ಮತ್ತು ಭಯೋತ್ಪಾದಕರ ಮಾನವ ಹಕ್ಕುಗಳಿಗೆ ಗೌರವ ಕೊಡದಿರುವ ನಿರ್ಧಾರದಿಂದಾಗಿ ಕಳೆದ ಐದು ವರ್ಷದಲ್ಲಿ ಭಾರತದಲ್ಲಿ ಭಯೋತ್ಪಾದನಾ ಘಟನೆಗಳು ಗಣನೀಯವಾಗಿ ಕುಸಿದಿದೆ.
source: rightlog.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.