ಚೆನ್ನೈ: ಒಂದು ದಿನ ವಿಮಾನ ಹತ್ತುತ್ತೇನೆ ಎಂದು 102 ವರ್ಷದ ಕುಪ್ಪತಾಲ್ ಎಂದೂ ಅಂದುಕೊಂಡಿರಲಿಲ್ಲ, ಆದರೆ ಭಾನುವಾರ ವಿಮಾನ ಹತ್ತಿದ ತಮಿಳುನಾಡಿನ ದೇವರಾಯನ್ಪಾಲಯಂ ಗ್ರಾಮದ 115 ಹಿರಿಯ ನಾಗರಿಕರ ತಂಡದಲ್ಲಿ ಅವರೂ ಒಬ್ಬರಾಗಿದ್ದರು. ಇಬ್ಬರು ಉದ್ಯಮಗಳ ದೆಸೆಯಿಂದಾಗಿ ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟದ ಅನುಭವವನ್ನು ಪಡೆದರು. ಕೊಯಂಬತ್ತೂರಿನಿಂದ ಚೆನ್ನೈಗೆ ಇವರು ವಿಮಾನದ ಮೂಲಕ ಆಗಮಿಸಿದರು.
ಈ ತಂಡದಲ್ಲಿ ಬಹುತೇಕ ಮಂದಿ ಮಹಿಳೆಯುರಾಗಿದ್ದು, ಟೆಕ್ಸ್ಟೈಲ್ ಕೈಗಾರಿಕೆಯಲ್ಲಿ ದುಡಿಯುತ್ತಿದ್ದರು. ಇವರನ್ನು ವಿಮಾನದ ಮೂಲಕ ಚೆನ್ನೈಗೆ ಕರೆಸಿ ದೇಗುಲ, ಮಸೀದಿ ಮುಂತಾದ ಯಾತ್ರಾ ಸ್ಥಳಗಳಿಗೆ ಸುತ್ತಾಡಿಸಲಾಗಿದೆ.
ಈ ತಂಡದಲ್ಲಿ 102 ವರ್ಷದ ಕುಪ್ಪತಾಲ್ ಅವರು ಅತ್ಯಂತ ಹಿರಿಯರಾಗಿದ್ದು, ವಿಮಾನಯಾನ ಇವರಿಗೆ ಅತೀವ ಸಂತೋಷವನ್ನು ನೀಡಿದೆ. ‘ವಿಮಾನ ಹಾರಾಟ ತುಂಬಾ ಸುಂದರವಾಗಿತ್ತು, ನಾನು ಎಂಜಾಯ್ ಮಾಡಿದೆ, ಅವರು ನನ್ನ ಬಗ್ಗೆ ತುಂಬಾನೇ ಕಾಳಜಿ ವಹಿಸಿದರು’ ಎಂದಿದ್ದಾರೆ.
ತಂಡದ ಎಲ್ಲರಿಗೂ ವಿಮಾನ ಹಾರಾಟ ಎಂಬುದು ಒಂದು ಕನಸಾಗಿತ್ತು. ಆ ಕನಸು ನಿಜರೂಪಕ್ಕೆ ಒಂದು ದಿನ ಬರಬಹುದು ಎಂಬ ಊಹೆಯೂ ಅವರಿಗಿರಲಿಲ್ಲ. ’ವಿಮಾನ ಮೇಲಕ್ಕೆ ಹೋದಂತೆ ನಾನು ಆಗಸದತ್ತವೇ ದೃಷ್ಟಿ ಹರಿಸಿದ್ದೆ. ನಮ್ಮಲ್ಲಿ ಬಹುತೇಕರು ರೈಲನ್ನು ಕೂಡ ಹತ್ತಿರಲಿಲ್ಲ. ಈ ವಿಮಾನಯನ ನನಗೆ ಮರೆಯಲಾರದ ನೆನಪು’ ಎಂದು 63 ವರ್ಷದ ಸರಸ್ವತಿ ಹೇಳಿದ್ದಾರೆ.
ಎಂ.ರವಿ ಮತ್ತು ಇನ್ನೊಬ್ಬರು ಉದ್ಯಮಿಗಳು ಜಂಟಿಯಾಗಿ ಈ ತಂಡವನ್ನು ವಿಮಾನದಲ್ಲಿ ಹಾರುವಂತೆ ಮಾಡಿದ್ದಾರೆ. ಇನ್ನೊಬ್ಬರನ್ನು ಸಂತೋಷವಾಗಿಡುವಲ್ಲಿ ನಮ್ಮ ಸಂತೋಷ ಅಡಕವಾಗಿರುತ್ತದೆ. ಅದೇ ಕಾರಣಕ್ಕೆ ನಾವಿದ್ದನ್ನು ಮಾಡಿದ್ದೇವೆ ಎನ್ನುತ್ತಾರೆ ರವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.