ತುಕುರ್ಗಾನರ: ಪಶ್ಚಿಮಬಂಗಾಳದ ನಾರ್ತ್ 24 ಪರಗಣದ ತುಕುರ್ಗಾನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಆಯೋಜಿಸಿದ್ದ ಸಮಾವೇಶಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಕಾಲ್ತುಳಿತದಂತಹ ಪರಿಸ್ಥಿತಿಗಳು ನಿರ್ಮಾಣವಾಗಿವೆ. ಈ ಕಾರಣಕ್ಕಾಗಿ ಪ್ರಧಾನಿಯವರು ತಮ್ಮ ಭಾಷಣದ ಅವಧಿಯನ್ನು ಕಡಿತಗೊಳಿಸಿದರು.
ಪಶ್ಚಿಮಬಂಗಾಳದಲ್ಲಿ ಪ್ರಧಾನಿ ತಮ್ಮ ಪ್ರಚಾರ ಸಮಾವೇಶಕ್ಕೆ ಇಂದು ಮೋದಿ ಚಾಲನೆಯನ್ನು ನೀಡಿದ್ದಾರೆ, ಅವರನ್ನು ಪರಿಶಿಷ್ಟ ಜಾತಿ ಮೆತ್ವಾ ಸಮುದಾಯದ ಜನ ಮುಗಿಳುಮುಟ್ಟುವ ಉದ್ಘೋಷಗಳೊಂದಿಗೆ ಸ್ವಾಗತಿಸಿದ್ದಾರೆ.
ಸಮಾವೇಶದಲ್ಲಿ ಮೆತ್ವಾ ಸಮುದಾಯದ ಅಪಾರ ಜನರು ನೆರೆದಿದ್ದು, ಸ್ಥಳ ಸಾಕಾಗದೆ ಹೊರಭಾಗದಲ್ಲಿ ಜನ ಎಲ್ಲೆಂದರಲ್ಲಿ ನೇತಾಡುತ್ತಿದ್ದರು. ಇದರಿಂದ ತುಸು ಗೊಂದಲದ ವಾತಾವರಣ ನಿರ್ಮಾಣವಾಯಿತು. ಮೋದಿ ಶಾಂತಿ ಮತ್ತು ಸುರಕ್ಷತೆ ಕಾಪಾಡುವಂತೆ ಪದೇ ಪದೇ ಮನವಿ ಮಾಡಿಕೊಳ್ಳಬೇಕಾಯಿತು.
ತಮ್ಮ 14 ನಿಮಿಷಗಳ ಭಾಷಣದಲ್ಲಿ ಮೋದಿಯವರು ಪಶ್ಚಿಮಬಂಗಾಳದ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
‘ಈ ಅಪಾರ ಜನಸ್ತೋಮವನ್ನು ನೋಡಿ ನನಗೆ ಯಾಕೆ ಮಮತಾ ಬ್ಯಾನರ್ಜಿ ಹಿಂಸಾಚಾರದಲ್ಲಿ ತೊಡಗಿದೆ ಎಂಬುದರ ಅರಿವಾಗುತ್ತಿದೆ. ತಮ್ಮನ್ನು ತಾವು ಪ್ರಜಾಪ್ರಭುತ್ವ ವಾದಕರು ಎಂದು ಜಾಹೀರಾತು ನೀಡುವವರು ಹಿಂಸಾಚಾರದಲ್ಲಿ ತೊಡಗಿದ್ದಾರೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.