ನವದೆಹಲಿ: ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣದ ಸಹ ಆರೋಪಿ ರಾಜೀವ್ ಸಕ್ಸೇನಾ ಮತ್ತು ಕಾರ್ಪೋರೇಟ್ ಲಾಬಿದಾರ ದೀಪಕ್ ತಲ್ವಾರ್ ಅವರು ಭಾರತಕ್ಕೆ ಗಡಿಪಾರು ಆಗಿರುವುದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿಯವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೊಂಡಾಡಿದ್ದಾರೆ.
ನಮ್ಮ ಸರ್ಕಾರ ಆಡಳಿತದಲ್ಲಿ ಪ್ರಾಮಾಣಿಕತೆಯ ಸಂಸ್ಕೃತಿಯನ್ನು ಪರಿಚಯಿಸಿದೆ, ಭಾರತಕ್ಕೆ ವಂಚನೆ ಮಾಡಿ ಜಗತ್ತಿನ ಮೂಲೆಯಲ್ಲಿ ಕೂತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಸದ್ಯ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೇಟ್ಲಿಯವರು ಸರಣಿ ಟ್ವಿಟ್ಗಳನ್ನು ಮಾಡಿ, ‘ಯುಪಿಯ ಅಸ್ಥಿಪಂಜರಗಳು ಉರುಳಲಾರಂಭಿಸಿವೆ. ಯಾಕೆ ಎಲ್ಲಾ ರಕ್ಷಣಾ ಖರೀದಿಗಳಿಗೂ ಮಧ್ಯವರ್ತಿಗಳ ಅವಶ್ಯಕತೆ ಇತ್ತು?’
”ಭಾರತಕ್ಕೆ ಮೋಸ ಮಾಡಿ ಜಗತ್ತಿನ ಯಾವುದೇ ಮೂಲೆಯಲ್ಲಿ ತಪ್ಪಿಸಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ನಾಗರಿಕತ್ವದ ಅಂತಾರಾಷ್ಟ್ರೀಯ ಪ್ರಕ್ರಿಯೆಗಳು ಅವರನ್ನು ಸಿಗುವಂತೆ ಮಾಡುತ್ತದೆ”
”ಪ್ರಧಾನಿ ಮಂತ್ರಿ ಪ್ರಾಮಾಣಿಕವಾಗಿದ್ದಾರೆ, ಆಡಳಿತದಲ್ಲಿ ಪ್ರಾಮಾನಿಕ ಸಂಸ್ಕೃತಿಯನ್ನು ತಂದಿದ್ದರೆ, ಯಾರೊಬ್ಬರೂ ಭಾರತಕ್ಕೆ ಮೋಸ ಮಾಡಿ ತಲೆಮರಿಸಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
ರಾಜೀವ್ ಸಕ್ಸೇನಾ ಅವರನ್ನು ಯುಎಇ ನಿವಾಸದಿಂದ ಭಾರತಕ್ಕೆ ಗುರುವಾರ ಗಡಿಪಾರು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.