ಪಣಜಿ: ಆರೋಗ್ಯ ವಿಚಾರಿಸುವ ಸಲುವಾಗಿ ಆದ ಭೇಟಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಪಿಸಿದ್ದಾರೆ.
ರಾಹುಲ್ ಅವರು ನೀಡಿದ ಐದು ನಿಮಿಷಗಳ ಭೇಟಿಯಲ್ಲಿ ರಫೇಲ್ ಒಪ್ಪಂದದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಯಿಯೊಂದಿಗೆ ಗೋವಾ ಪ್ರವಾಸದಲ್ಲಿರುವ ರಾಹುಲ್, ಗುರುವಾರ ಪರಿಕ್ಕರ್ ಅವರನ್ನು ಗೋವಾ ವಿಧಾನಸಭಾ ಆವರಣದಲ್ಲಿ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರಿಗೆ ಹೇಳಿಕೆ ನೀಡಿದ ರಾಹುಲ್, ‘ಮೋದಿ ಪ್ರಾಯೋಜಕತ್ವದ ರಫೇಲ್ ಒಪ್ಪಂದದಲ್ಲಿ ನನ್ನ ಪಾತ್ರವಿಲ್ಲ ಎಂಬುದಾಗಿ ಪರಿಕ್ಕರ್ ನನ್ನ ಬಳಿ ಹೇಳಿಕೊಂಡರು’ ಎಂದಿದ್ದರು. ರಾಹುಲ್ ಹೇಳಿಕೆಯನ್ನು ಪರಿಕ್ಕರ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ಸ್ಪಷ್ಟನೆ ನೀಡಿ ಪತ್ರ ಬರೆದಿರುವ ಅವರು, ‘ರಾಹುಲ್ ಅವರೊಂದಿಗಿನ ಐದು ನಿಮಿಷಗಳ ಭೇಟಿಯಲ್ಲಿ ರಫೆಲ್ ಒಪ್ಪಂದದ ಬಗ್ಗೆ ಯಾವುದೇ ಉಲ್ಲೇಖಗಳು ಇರಲಿಲ್ಲ. ಅವರು ಈ ಭೇಟಿಯನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ’ ಎಂದಿದ್ದಾರೆ.
Goa CM Manohar Parrikar writes to Congress President Rahul Gandhi, writes “I feel let down that you have used this visit for your petty political gains. In the 5 minutes you spent with me, neither did you mention anything about Rafale, now did we discuss anything related to it.’ pic.twitter.com/HbUX6yiDk3
— ANI (@ANI) January 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.