ಖಾನ್ಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಪ್ರತಿಪಕ್ಷಗಳ ಮಹಾಮೈತ್ರಿಯ ಬಗ್ಗೆ ವ್ಯಂಗ್ಯವಾಡಿದ್ದು, ಒಂದು ವೇಳೆ ಮಹಾಮೈತ್ರಿ ಸರ್ಕಾರ ರಚಿಸಿದರೆ ದಿನಕ್ಕೊಬ್ಬ ಪ್ರಧಾನಿಯನ್ನು ಈ ದೇಶ ಕಾಣಲಿದೆ ಎಂದಿದ್ದಾರೆ.
ಉತ್ತರಪ್ರದೇಶದ ಖಾನ್ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಹಾಮೈತ್ರಿ ಸರ್ಕಾರ ರಚಿಸಿದರೆ, ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್, ಬುಧವಾರ ಮಮತಾ ಬ್ಯಾನರ್ಜಿ, ಗುರುವಾರ ಶರದ್ ಪವಾರ್, ಶುಕ್ರವಾರ ದೇವೇಗೌಡ, ಶನಿವಾರ ಸ್ಟಾಲಿನ ಪ್ರಧಾನಿಯಾಗಲಿದ್ದಾರೆ. ಭಾನುವಾರ ದೇಶ ರಜೆಯಲ್ಲಿರಲಿದೆ’ ಎಂದಿದ್ದಾರೆ.
ನಮಗೆ 4ಬಿ ಅಂದರೆ ‘ಬಡ್ತಾ ಭಾರತ್, ಬನತಾ ಭಾರತ್, ಆದರೆ ಅವರಿಗೆ ಬುವಾ, ಬಾಬು, ಭಾಯಿ ಮತ್ತು ಬಹನ್’ ಎನ್ನುವ ಮೂಲಕ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ವಿರುದ್ಧ ರಚನೆ ಮಾಡಲಾಗಿರುವ ಈ ಮಹಾಮೈತ್ರಿ, ಅಪರಾಧ, ಭ್ರಷ್ಟಚಾರ, ಸ್ವಾರ್ಥದ ಕೂಪವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.