ನವದೆಹಲಿ: ಸರ್ಕಾರದ ಯೋಜನೆಗಳ ಸಬ್ಸಿಡಿಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಲಾಭ ವರ್ಗಾವಣೆ (direct benefit transfer) ಮಾಡುತ್ತಿರುವುದರಿಂದ ಉಳಿತಾಯವಾದ ಹಣ ರೂ.1.1 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂಬುದು 2018ರ ಡಿಸೆಂಬರ್ 31ರಂದು ಅಪ್ಡೇಟ್ ಆದ ಅಂಕಿಅಂಶಗಳಿಂದ ತಿಳಿದು ಬಂದಿದೆ.
ಸರ್ಕಾರದಿಂದ ವಿವಿಧ ಸಬ್ಸಿಡಿಗಳನ್ನು ಪಡೆಯುತ್ತಿದ್ದ ಸುಮಾರು 80 ಮಿಲಿಯನ್ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿರುವುದರಿಂದಲೂ ಇಷ್ಟು ಪ್ರಮಾಣದ ಹಣ ಉಳಿತಾಯವಾಗಲು ಸಾಧ್ಯವಾಗಿದೆ.
80 ಮಿಲಿಯನ್ ನಕಲಿ ಫಲಾನುಭವಿಗಳನ್ನು ದಾಖಲೆಯಿಂದ ತೆಗೆದು ಹಾಕಿದ ಕಾರಣದಿಂದಾಗಿ ರೂ.6,05,900 ಕೋಟಿಗಳು ಉಳಿತಾಯವಾಗಿದೆ ಎನ್ನಲಾಗಿದೆ.
ಹೊಸ ದಾಖಲೆಯ ಅನುಸಾರ, ಸರ್ಕಾರ 40.9 ಮಿಲಿಯನ್ ನಕಲಿ ಉಚಿತ ಎಲ್ಪಿಜಿ ಫಲಾನುಭವಿಗಳನ್ನು ದಾಖಲೆಯಿಂದ ತೆಗೆದು ಹಾಕಿದೆ. ಇದರಿಂದ ಸುಮಾರು 54,000 ಕೋಟಿ ಉಳಿತಾಯವಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು 28.2 ಮಿಲಿಯನ್ ಪಡಿತರ ಕಾರ್ಡುಗಳನ್ನು ತೆಗೆದು ಹಾಕಲಾಗಿದೆ ಮತ್ತು 3,83,000 ನಕಲಿ ಫಲಾನುಭವಿಗಳನ್ನು ರಾಷ್ಟ್ರೀಯ ಸಾಮಾಜಿಕ ಬೆಂಬಲ ಕಾರ್ಯಕ್ರಮದಿಂದ ಅಳಿಸಲಾಗಿದೆ. ಇಲ್ಲಿಯವರೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಮತ್ತು ಸಾಮಾಜಿಕ ನ್ಯಾಯದ ಸಚಿವಾಲಯಗಳಲ್ಲಿನ ವಿದ್ಯಾರ್ಥಿವೇತನ ಯೋಜನೆಗಳ ಕ್ರಮವಾಗಿ ಸುಮಾರು 526,000 ಮತ್ತು 169,000 ನಕಲಿ ಫಲಾನುಭವಿಗಳನ್ನು ಹೊರಗಿಡಲಾಗಿದೆ. ಆಂಗನವಾಡಿ ಸೇವೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಪೂರಕ ಪೋಷಣೆಯ ಕಾರ್ಯಕ್ರಮದಿಂದ 9 ಮಿಲಿಯನ್ ನಕಲಿ ಫಲಾನುಭವಿಗಳನ್ನು ಹೊರಗಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.