ನವದೆಹಲಿ: ಭಾರತೀಯ ಕೃಷಿ ಸಂಶೋಧನಾ ಮಂಡಳಿ(Indian Council of Agricultural Research)ಯ ಟ್ಯಾಬ್ಲೋ ಗಣರಾಜ್ಯೋತ್ಸವ ಪರೇಡ್ನ ಅತ್ಯುತ್ತಮ ಟ್ಯಾಬ್ಲೋ ಎಂಬ ಕೀರ್ತಿಗೆ ಬಾಜನವಾಗಿದ್ದು, ಕೇಂದ್ರ ಇಲಾಖೆ ಟ್ಯಾಬ್ಲೋಗಳ ಪೈಕಿ ಮೊದಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
‘ಕಿಸಾನ್ ಗಾಂಧಿ’ ಎಂಬ ಥೀಮ್ನೊಂದಿಗೆ ‘ಮಿಶ್ರಿತ್ ಖೇತಿ, ಖುಷಿಯೋಂ ಕಿ ಖೇತಿ’ ಎಂಬ ಘೋಷವಾಕ್ಯ ನೀಡಿ ಕೃಷಿ ಸಂಶೋಧನಾ ಮಂಡಳಿ ಟ್ಯಾಬ್ಲೋವನ್ನು ಸಿದ್ಧಪಡಿಸಿತ್ತು. ಗೋವು, ಆಡುಗಳನ್ನು ಸಾಕುತ್ತಾ, ಚರಕ ನೇಯುವ ರೀತಿಯಲ್ಲಿ ಗಾಂಧೀಜಿ ಮತ್ತು ಕಸ್ತೂರಿ ಬಾ ಅವರನ್ನು ಬಿಂಬಿಸಲಾಗಿತ್ತು. ಮಿಶ್ರ ಕೃಷಿ ಲಾಭದಾಯಕ ಎಂಬ ಸಂದೇಶವನ್ನು ಇದು ಸಾರಿತ್ತು.
ಇನ್ನು ರಾಜ್ಯಗಳ ಪೈಕಿ ತ್ರಿಪುರಾದ ಟ್ಯಾಬ್ಲೋಗೆ ಪ್ರಥಮ ಪ್ರಶಸ್ತಿ ಬಂದಿದೆ, ಜಮ್ಮು ಕಾಶ್ಮೀರದ ಟ್ಯಾಬ್ಲೋಗೆ ಎರಡನೇ ಪ್ರಶಸ್ತಿ, ಪಂಜಾಬ್ ಟ್ಯಾಬ್ಲೋಗೆ ಮೂರನೇ ಪ್ರಶಸ್ತಿ ಬಂದಿದೆ. ‘ಗಾಂಧೀ ತತ್ವದಡಿ ಗ್ರಾಮೀಣ ಆರ್ಥಿಕತೆಯ ಸುಧಾರಣೆ’ ಥೀಮ್ನಲ್ಲಿ ತ್ರಿಪುರಾ ಟ್ಯಾಬ್ಲೋ ರಚನೆ ಮಾಡಿತ್ತು.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶಸ್ತಿಗಳನ್ನು ಪ್ರದಾನಿಸಿದ್ದಾರೆ.
70ನೇ ಗಣರಾಜ್ಯೋತ್ಸವದಲ್ಲಿ 22 ಟ್ಯಾಬ್ಲೋಗಳು ಭಾಗಿಯಾಗಿದ್ದವು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಟ್ಯಾಬ್ಲೋಗಳು, ವಿವಿಧ ಕೇಂದ್ರ ಸಚಿವಾಲಯಗಳ 6 ಟ್ಯಾಬ್ಲೋಗಳು ಭಾಗಿಯಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.