ಲಕ್ನೋ: ತನ್ನ ತಂದೆ ತಯಾರಿಸಿದ್ದ ಪಾದುಕೆಯನ್ನು ಅವರ ಕೊನೆಯ ಆಸೆಯಂತೆಯೇ ಆರು ವರ್ಷದ ಬಾಲಕಿಯೊಬ್ಬಳು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಮರ್ಪಣೆ ಮಾಡಿದ್ದಾಳೆ.
ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಶರ್ಮಾ ಎಂಬುವವರ ಮಗಳು ರಿಂಜಿಮ್ ಯೋಗಿಗೆ ಪಾದುಕೆ ನೀಡಿದ್ದಾಳೆ. ಶರ್ಮಾ ಅವರು ಕಳೆದ ನವೆಂಬರ್ನಲ್ಲಿ ಅಪಘಾತದಲ್ಲಿ ನಿಧನರಾಗಿದ್ದರು.
ಶರ್ಮಾ ಯೋಗಿ ಅವರಿಗಾಗಿ ಮರದ ಪಾದುಕೆಯೊಂದನ್ನು ತಯಾರಿಸಿದ್ದರು. ಅದನ್ನು ಯೋಗಿಗೆ ನೀಡಬೇಕು ಎಂಬುದು ಅವರ ಹೆಬ್ಬಯಕಯೆಯಾಗಿತ್ತು. ಆದರೆ ಅದು ನೆರವೇರುವ ಮುನ್ನವೇ ಇಹಲೋಕ ತ್ಯಜಿಸಿದ್ದರು. ಇದೀಗ ಅವರ ಆಸೆಯನ್ನು ಅವರ ಮಗಳು ರಿಮ್ಜಿಮ್ ನೆರವೇರಿಸಿದ್ದಾಳೆ.
ರಿಮ್ಜಿಮ್ ತಾಯಿಯೂ 2016ರಲ್ಲಿ ನಿಧನರಾಗಿದ್ದು, ಆಕೆಯ ತಾಯಿಯ ಸಂಬಂಧಿಗಳು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ.
ತನ್ನ ನಿವಾಸಕ್ಕೆ ಆಗಮಿಸಿದ ಬಾಲಕಿಯ ಬಳಿ ಯೋಗಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಶಾಲೆಯಲ್ಲಿ ಪುಸ್ತಕ, ಸಮವಸ್ತ್ರ ಸಿಗುತ್ತದೆಯೇ?, ಸಂಬಂಧಿಗಳು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ 5 ಲಕ್ಷ ರೂಪಾಯಿ ಧನ ಸಹಾಯ ಘೋಷಿಸಿದ್ದಾರೆ. ಆಕೆಯ ಅಜ್ಜಿಯ ಹೆಸರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಆದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.