ಲಕ್ನೋ: ಯೋಗಿ ಆದಿತ್ಯನಾಥ ಸರ್ಕಾರದ ಮೊದಲ 16 ತಿಂಗಳುಗಳಲ್ಲಿ ಉತ್ತರಪ್ರದೇಶ ಪೊಲೀಸರು ಸುಮಾರು 3 ಸಾವಿರ ಎನ್ಕೌಂಟರ್ಗಳನ್ನು ನಡೆಸಿದ್ದಾರೆ. ವರದಿಗಳ ಪ್ರಕಾರ, ಎನ್ಕೌಂಟರ್ಗಳಿಂದಾಗಿ ಒಟ್ಟು 78 ಅಪರಾಧಿಗಳು ಹತ್ಯೆಯಾಗಿದ್ದು, ಸುಮಾರು 838 ಅಪರಾಧಿಗಳು ಬಂಧನಗೊಂಡಿದ್ದಾರೆ.
ಮೂಲಗಳ ಪ್ರಕಾರ, ಗಣರಾಜ್ಯೋತ್ಸವದಂದು, ಪೊಲೀಸ್ ಎನ್ಕೌಂಟರ್ಗಳ ಪಟ್ಟಿ ಮತ್ತು ಬಂಧಿತರ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸಲಾಗುತ್ತಿದೆ. ಈಗಾಗಲೇ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ಈ ಬಗೆಗಿನ ಸೂಚನೆಯನ್ನು ಯುಪಿ ರಾಜ್ಯ ಕಾರ್ಯದರ್ಶಿ ಅನುಪ್ ಚಂದ್ರ ಪಾಂಡೆ ಅವರು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಯೋಗಿ ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದ ತರುವಾಯ, ಉತ್ತರಪ್ರದೇಶದ ಗೂಂಡಾ ರಾಜ್ಗೆ ಕಡಿವಾಣ ಹಾಕುವುದಾಗಿ ಶಪಥ ಮಾಡಿದ್ದರು. ಅದರಂತೆ ಅಪರಾಧಿಗಳಿಗೆ ಎಚ್ಚರಿಕೆ ರವಾನಿಸಿದ್ದ ಅವರು, ಒಂದಾ ಶರಣಾಗಿ, ಇಲ್ಲವೇ ತೊಲಗಿ ಎಂದೂ ಕರೆ ನೀಡಿದ್ದರು. ಪೊಲೀಸರಿಗೆ ಎನ್ಕೌಂಟರ್ ನಡೆಸಲು ಸ್ವತಂತ್ರ ನೀಡಿದರು.
ಯೋಗಿ ಕ್ರಮದಿಂದಾಗಿ ಭಯಗೊಂಡಿದ್ದ ಹಲವಾರು ಮಂದಿ ಅಪರಾಧಿಗಳು ಜೈಲಿನಿಂದ ಹೊರಕ್ಕೆ ಬರಲು ಭಯಪಟ್ಟು, ತಮ್ಮ ಜಾಮೀನನನ್ನು ರದ್ದುಪಡಿಸಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.