ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸ ಅವರು, ಭಾರತದ ಭೇಟಿಯ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲ ಮೂರು ವರ್ಷಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಈ ಸಮಗ್ರ ಒಪ್ಪಂದವು, ರಕ್ಷಣಾ ಭದ್ರತೆ, ರಾಜಕೀಯ ಸಂಬಂಧ, ವ್ಯಾಪಾರ ಮತ್ತು ಹೂಡಿಕೆ, ನೀಲಿ ಆರ್ಥಿಕತೆ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ ಮತ್ತು ಕೃಷಿ ಹೀಗೆ ಎಲ್ಲವನ್ನೂ ಒಳಗೊಳ್ಳಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಟಿಎಸ್ ತಿರುಮೂರ್ತಿಯವರು, ‘ನಮ್ಮ ನಡುವೆ ಕಾರ್ಯತಾಂತ್ರಿಕ ಪಾಲುದಾರಿತ್ವ ಇದೆ ಆದರೆ ಪ್ರತಿ ವಲಯವನ್ನೂ ನಿರ್ದಿಷ್ಟವಾಗಿ ತೆಗೆದುಕೊಂಡು ಸಂಬಂಧ ಬಲಪಡಿಸಲು ಬಯಸಿದ್ದೇವೆ. ಇದಕ್ಕೆ ರೋಡ್ಮ್ಯಾಪ್ ಅತ್ಯಗತ್ಯವಾಗಿದ್ದು, 3 ವರ್ಷಗಳ ರೋಡ್ಮ್ಯಾಪ್ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ’ ಎಂದಿದ್ದಾರೆ.
1997ರಿಂದ ಕಾರ್ಯತಾಂತ್ರಿಕ ಪಾಲುದಾರಿತ್ವ ಹೊಂದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ, ವ್ಯಾಪಾರ ಮತ್ತು ರಕ್ಷಣೆಯಲ್ಲಿ ಆತ್ಮೀಯ ಬಾಂಧವ್ಯ ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.