ಶ್ರೀನಗರ: ದಕ್ಷಿಣ ಕಾಶ್ಮೀರದ ಸೋಪಿಯಾನದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ವೀರ ಮರಣವನ್ನು ಅಪ್ಪಿದ ಲ್ಯಾನ್ಸ್ ನಾಯ್ಕ್ ನಾಝೀರ್ ಅಹ್ಮದ್ ವಾನಿ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗುತ್ತಿದೆ.
‘ಲ್ಯಾನ್ಸ್ ನಾಯ್ಕ್ ನಝೀರ್ ಅಹ್ಮದ್ ವಾನಿ ಅವರು ಎರಡು ಉಗ್ರರನ್ನು ಹತ್ಯೆ ಮಾಡಿ, ತನ್ನ ಗಾಯಗೊಂಡ ಸಹೋದ್ಯೋಗಿಗಳನ್ನು ಕದನ ಸ್ಥಳದಿಂದ ಬೇರೆಡೆಗೆ ಸ್ಥಳಾಂತರ ಮಾಡಲು ಶ್ರಮಿಸಿದ್ದರು, ನಂತರ ಭಾರತೀಯ ಸೇನೆಯ ಶ್ರೇಷ್ಠ ಪರಂಪರೆಯಂತೆ ಅತ್ಯುನ್ನತ ಬಲಿದಾನವನ್ನು ಮಾಡಿದ್ದಾರೆ’ ಎಂದು ರಾಷ್ಟ್ರಪತಿ ಕಾರ್ಯಾಲಯ ಪ್ರಕಟನೆಯಲ್ಲಿ ಹೇಳಿದೆ.
ಒಂದು ಕಾಲದಲ್ಲಿ ವಾನಿ ಭಯೋತ್ಪಾದಕನಾಗಿದ್ದ ಎಂಬುದು ಉಲ್ಲೇಖಾರ್ಹ, ಬಳಿಕ ಅವರು ಸೇನೆಗೆ ಶರಣಾಗಿ, ಕಣಿವೆಯಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
2004ರಲ್ಲಿ ಸೇನೆಗೆ ಸೇರ್ಪಡೆಗೊಂಡರು, ಟೆರಿಟೋರಿಯಲ್ ಆರ್ಮಿಯ 162ನೇ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸಿದ್ದರು. 2018ರ ನವೆಂಬರ್ನಲ್ಲಿ ಹುತಾತ್ಮರಾಗುವುದಕ್ಕೂ ಮುನ್ನ ಅವರು ಹಲವಾರು ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕುಲ್ಗಾಂ ನಿವಾಸಿಯಾಗಿರುವ ಇವರು ಎರಡು ಬಾರಿ ಸೇನಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.