ಮುಂಬಯಿ: ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದ ರೈತರಿಗೆ ದೇಸಿ ಹಸುಗಳನ್ನು ನೀಡಲು ನಿರ್ಧರಿಸಿದೆ.
ಪರಿಶಿಷ್ಟ ಜಾತಿ ಸಹ ಯೋಜನೆ(ಎಸ್ಸಿಎಸ್ಪಿ)ಯ ಭಾಗವಾಗಿ ಹಾಲು ನೀಡುವ ದೇಸಿ ಹಸುಗಳನ್ನು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ರೈತರಿಗೆ ನೀಡಲಾಗುತ್ತಿದೆ.
ಈ ಯೋಜನೆಯಡಿ ಹಸು ಮತ್ತು ಎಮ್ಮೆಗಳನ್ನು ವಿತರಿಸಲು 2015ರಲ್ಲಿ ನಿರ್ಧರಿಸಲಾಗಿತ್ತು, ಇದುವರೆಗೆ ವಿದೇಶಿ ತಳಿಯ ಹಸುಗಳನ್ನು ನೀಡಲಾಗುತ್ತಿತ್ತು. ಆದರೀಗ ದೇಸಿ ಹಸುಗಳನ್ನೂ ಈ ಯೋಜನೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ದೇಸಿ ಹಸುಗಳನ್ನು ಸಂರಕ್ಷಣೆ ಮಾಡಲು ಮತ್ತು ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಗಿರ್, ಸಹಿವಾಲ್, ಕೆಂಪು ಸಿಂಧಿ, ರಥಿ, ಥಪರ್ಕರ್, ದಿಯೋನಿ, ಲಾಲ್ ಕಂಧರಿ, ಗೊವಾಲೊ, ದಂಗಿ ಮುಂತಾದ ದೇಸಿ ಹಸುಗಳನ್ನು ನೀಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.