ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಕೆಂಪುಕೋಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂನ್ನು ಲೋಕಾರ್ಪಣೆಗೊಳಿಸಿದ್ದಾರೆ. ನೇತಾಜೀ ಅವರ 122ನೇ ಜನ್ಮದಿನದ ಪ್ರಯುಕ್ತ ಮ್ಯೂಸಿಯಂ ಉದ್ಘಾಟನೆಗೊಳಿಸಲಾಗಿದೆ.
ನೇತಾಜೀ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಗೆ ಸಮರ್ಪಿಸಿ ಈ ಮ್ಯೂಸಿಯಂನ್ನು ಸ್ಥಾಪಿಸಲಾಗಿದೆ. ಬೋಸ್ ಅವರು ಬಳಸುತ್ತಿದ್ದ ಮರದ ಕುರ್ಚಿ, ಪದಕಗಳು, ಬ್ಯಾಡ್ಜ್, ಸಮವಸ್ತ್ರ, ಖಡ್ಗ, ಇತರ ವಸ್ತುಗಳನ್ನು ಈ ಮ್ಯೂಸಿಯಂನಲ್ಲಿ ಇಡಲಾಗಿದೆ. ಇಂಡಿಯನ್ ನ್ಯಾಷನಲ್ ಆರ್ಮಿಗೆ ಸಂಬಂಧಿಸಿದ ಹಲವಾರು ವಸ್ತುಗಳೂ ಇಲ್ಲಿವೆ.
ಪ್ರಧಾನಿಗಳು ಯಾದ್-ಇ-ಜಲ್ಲಿಯನ್ ಮ್ಯೂಸಿಯಂ ಮತ್ತು 1857-ಭಾರತ ಮೊದಲ ಯುದ್ಧದ ಮ್ಯೂಸಿಯಂಗೂ ಭೇಟಿ ನೀಡಿದ್ದಾರೆ.
ಯಾದ್-ಇ-ಜಲ್ಲಿಯನ್ ಮ್ಯೂಸಿಯಂ ಜಲಿಯನ್ ವಾಲಾಭಾಗ್ ನರಮೇಧದ ಪೂರ್ಣ ಮಾಹಿತಿಯನ್ನು ನೀಡುತ್ತದೆ. ಮೊದಲ ವಿಶ್ವಯುದ್ಧದಲ್ಲಿ ಭಾರತೀಯ ಯೋಧರು ಮಾಡಿದ ತ್ಯಾಗವನ್ನೂ ಇದು ಸ್ಮರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.