ಮಡಂತ್ಯಾರು: ಜೇಸಿಐ ಮಡಂತ್ಯಾರಿನ ಬೆಳ್ಳಿಹಬ್ಬ ವರ್ಷದ ಬೆಳ್ಳಿತೇರು ಸಂಭ್ರಮದ ವರ್ಷಾಚರಣೆಯು ಜೂ. 21ರಂದು ನಡೆಯಲಿದ್ದು ಈ ಸಂದರ್ಭ ಜೇಸಿಐನ ಭಾರತದ ರಾಷ್ಟ್ರಾಧ್ಯಕ್ಷರಾದ ಜೇಸಿಐ ಸೆನೆಟರ್ ಜಿ.ಸುಬ್ರಮಣಿಯಾನ್ರವರು ಭೇಟಿ ನೀಡಲಿದ್ದಾರೆ. ಈ ದಿನದಂದು ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಮಡಂತ್ಯಾರು, ಮಾಲಾಡಿ, ಮಚ್ಚಿನ ಪಂಚಾಯತಿಗೆ ಆಯ್ಕೆಗೊಂಡಿರುವ ಎಲ್ಲಾ ಸದಸ್ಯರನ್ನು ವಿಶೇಷವಾಗಿ ಅಭಿನಂದಿಸಲಾಗುವುದು.
ಮಾತ್ರವಲ್ಲದೇ ಈ ಕಾರ್ಯಕ್ರಮದಲ್ಲಿ ವಲಯ 15ರ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಕೃಷ್ಣಮೋಹನ್ ಪಿ.ಎಸ್, ಜೇಸಿಐ ಭಾರತದ ರಾಷ್ಟ್ರೀಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಜೇಸಿಐ ಸೆನೆಟರ್ ಸಂಪತ್ ಬಿ.ಸುವರ್ಣ, ಜೇಸಿಐನ ರಾಷ್ಟ್ರೀಯ ತರಬೇತುದಾರ ಜೇಸಿ ರಾಜೇಂದ್ರ ಭಟ್, ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲರಾದ ಜೇಸಿ ರಾಜನ್ ವಿ.ಎನ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕರಾದ ಜೋಸೆಪ್ ಎನ್.ಎಂ, ಮಡಂತ್ಯಾರಿನ ಪ್ರಸಿದ್ಧ ಉದ್ಯಮಿ ಜೇಸಿ ಜಯಂತ ಶೆಟ್ಟಿ, ಮಡಂತ್ಯಾರು ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ಮಾಲಾಡಿ ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ರವರು ಭಾಗವಹಿಸಲಿದ್ದಾರೆ.
ಈ ಸಂದರ್ಭ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮತ್ತು ಜೇಸಿ ವಲಯ 15ರ ಪ್ರಾಂತ್ಯ ಎಫ್ಗೆ ಒಳಪಟ್ಟ ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕರಾದ ಜೇಸಿ ಮೇಧಾವಿ ಎಂ., ನಿಕಟಪೂರ್ವಾಧ್ಯಕ್ಷರಾದ ಜೇಸಿ ಶ್ರೀಧರ ಆಚಾರ್ಯ, ಜೇಸಿರೆಟ್ ಅಧ್ಯಕ್ಷರಾದ ಜೇಸಿರೆಟ್ ಜೂಲಿಯೆಟ್ ಸಿಕ್ವೇರಾ, ಯುವ ಜೇಸಿ ಅಧ್ಯಕ್ಷರಾದ ಯುವಜೇಸಿ ಅಜಯ್ ಜೆ. ಶೆಟ್ಟಿ, ಕಾರ್ಯದರ್ಶಿ ಜೇಸಿ ವಿನ್ಸೆಂಟ್ ಮೋರಾಸ್ ಮತ್ತು ಜೇಸಿಐ ಮಡಂತ್ಯಾರಿನ ಅಧ್ಯಕ್ಷ ಜೇಸಿ ಐವಾನ್ ಸಿಕ್ವೇರಾರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.